Kannada NewsKarnataka NewsLatest

ಏರ್ಪೋರ್ಟ್ ನಿಂದ ಉದ್ಯಮಬಾಗ್ -ನೇರ ಬಸ್ ಸೌಲಭ್ಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಬಹುದಿನಗಳ ಬೇಡಿಕೆಯಾಗಿದ್ದ ವಿಮಾನ ನಿಲ್ದಾಣ – ಬೆಳಗಾವಿ ನಗರದ ಮಧ್ಯೆ ಬಸ್ ಸೌಲಭ್ಯ ಆರಂಭವಾಗಿದೆ.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮತ್ತು ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಸ್ ಆರಂಭಕ್ಕೆ ಹಸಿರು ನಿಶಾನೆ ತೋರಿದರು. ಹವಾನಿಯಂತ್ರಿತ ಈ ಬಸ್ ವಿಮಾನ ನಿಲ್ದಾಣದಿಂದ ಉದ್ಯಮಬಾಗ್ ವರೆಗೆ ಸಂಚರಿಸಲಿದೆ.

ಬೆಳಗಾವಿಗೆ ವಿಮಾನ ಸೌಲಭ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ವಿಮಾನ ನಿಲ್ದಾಣ ನಗರದಿಂದ ದೂರವಿರುವುದರಿಂದ ಅಲ್ಲಿಂದ ಪ್ರಯಾಣಿಕರು ಬರಲು ಖಾಸಗಿ ವಾಹನವನ್ನೇ ಅವಲಂಬಿಸಬೇಕಿತ್ತು. ಆಟೋಗಳಿಗೆ 300-400 ರೂ. ವೆಚ್ಚವಾಗುತ್ತಿತ್ತು.

ಹಾಗಾಗಿ ಬಸ್ ಸೌಲಭ್ಯ ಕಲ್ಪಿಸುವಂತೆ ಬಹುದಿನಗಳಿಂದ ಬೇಡಿಕೆ ಇತ್ತು. ದೀಪಾವಳಿಯ ದಿನ ಸಚಿವ ದ್ವಯರು ಬಸ್ ಸೌಲಭ್ಯಕ್ಕೆ ಚಾಲನೆ ನೀಡಿದರು.

Home add -Advt

Related Articles

Back to top button