Kannada NewsKarnataka NewsLatest

ಏರ್ಪೋರ್ಟ್ ನಿಂದ ಉದ್ಯಮಬಾಗ್ -ನೇರ ಬಸ್ ಸೌಲಭ್ಯ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಬಹುದಿನಗಳ ಬೇಡಿಕೆಯಾಗಿದ್ದ ವಿಮಾನ ನಿಲ್ದಾಣ – ಬೆಳಗಾವಿ ನಗರದ ಮಧ್ಯೆ ಬಸ್ ಸೌಲಭ್ಯ ಆರಂಭವಾಗಿದೆ.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮತ್ತು ರಾಜ್ಯದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಸ್ ಆರಂಭಕ್ಕೆ ಹಸಿರು ನಿಶಾನೆ ತೋರಿದರು. ಹವಾನಿಯಂತ್ರಿತ ಈ ಬಸ್ ವಿಮಾನ ನಿಲ್ದಾಣದಿಂದ ಉದ್ಯಮಬಾಗ್ ವರೆಗೆ ಸಂಚರಿಸಲಿದೆ.

ಬೆಳಗಾವಿಗೆ ವಿಮಾನ ಸೌಲಭ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೆ ವಿಮಾನ ನಿಲ್ದಾಣ ನಗರದಿಂದ ದೂರವಿರುವುದರಿಂದ ಅಲ್ಲಿಂದ ಪ್ರಯಾಣಿಕರು ಬರಲು ಖಾಸಗಿ ವಾಹನವನ್ನೇ ಅವಲಂಬಿಸಬೇಕಿತ್ತು. ಆಟೋಗಳಿಗೆ 300-400 ರೂ. ವೆಚ್ಚವಾಗುತ್ತಿತ್ತು.

ಹಾಗಾಗಿ ಬಸ್ ಸೌಲಭ್ಯ ಕಲ್ಪಿಸುವಂತೆ ಬಹುದಿನಗಳಿಂದ ಬೇಡಿಕೆ ಇತ್ತು. ದೀಪಾವಳಿಯ ದಿನ ಸಚಿವ ದ್ವಯರು ಬಸ್ ಸೌಲಭ್ಯಕ್ಕೆ ಚಾಲನೆ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button