Belagavi NewsBelgaum NewsKannada NewsKarnataka News

ಅಕ್ರಮ ಸಾರಾಯಿ ಮಾರಾಟ: ಒಂದು ವರ್ಷ ಕಾರಾಗೃಹವಾಸ


ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಅಕ್ರಮವಾಗಿ ಮದ್ಯ ಮಾರಾಟ ಪ್ರಕರಣದಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ
ವ್ಯಕ್ತಿಗೆ ಸ್ಥಳೀಯ ನ್ಯಾಯಾಲಯ ಒಂದು ವರ್ಷ ಕಾರಾಗೃಹವಾಸ ಮತ್ತು 10 ಸಾವಿರ ದಂಡ
ವಿಧಿಸಿ ತೀರ್ಪು ನೀಡಿದೆ.
2020ರ ಆ.1ರಂದು ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಭೀಮಪ್ಪ ನಿಂಗಪ್ಪ ಕೊರವಿ ಎಂಬ
ವ್ಯಕ್ತಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ಮಾಹಿತಿ ಪಡೆದ ಪೊಲೀಸರು ಆಗಿನ
ಖಾನಾಪುರ ಠಾಣೆಯ ಪಿ.ಎಸ್.ಐ ಬಸಗೌಡ ಪಾಟೀಲ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು
ಮಾಲುಸಮೇತ ಬಂಧಿಸಿದ್ದರು.

ಈ ಕುರಿತು ದೂರು ದಾಖಲಿಸಿಕೊಂಡ ಬಳಿಕ ನ್ಯಾಯಾಲಯಕ್ಕೆ
ಆಪಾದಿತನ ವಿರುದ್ಧ ಸಾಕ್ಷಿ ಸಮೇತ ದೋಷಾರೋಪಣೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ
ನಡೆಸಿದ ನ್ಯಾಯಾಲಯ ಸಾಕ್ಷಿಗಳ ಹೇಳಿಕೆ ಮತ್ತು ಪೊಲೀಸರು ನೀಡಿದ ದಾಖಲೆಗಳನ್ನು
ಪರಿಗಣಿಸಿ ಶನಿವಾರ ಆಪಾದಿತನಿಗೆ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಿದ್ದು,
ಸರ್ಕಾರದ ಪರವಾಗಿ ಸಹಾಯಕ ಅಭಿಯೋಜಕ ಎ.ಪಿ ನೇಸರಿಕರ ವಾದ ಮಂಡಿಸಿದ್ದರು ಮತ್ತು
ನ್ಯಾಯಾಲಯದ ಪಿ.ಸಿ ನಿತೀನ ಗಾಂವಕರ ದಾಖಲೆಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ
ಸಲ್ಲಿಸಲು ನೆರವಾಗಿದ್ದರು.

Home add -Advt

Related Articles

Back to top button