Kannada NewsKarnataka NewsLatest
*ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿಗೆ ಬೀದಿ ನಾಯಿ ದಾಳಿ: ರಕ್ಷಿಸಲು ಹೋದ 7 ಜರ ಮೇಲೂ ಅಟ್ಯಾಕ್*

ಪ್ರಗತಿವಾಹಿನಿ ಸುದ್ದಿ: ಜಾತಿಗಣತಿ ಸಮೀಕ್ಷೆಗೆ ತೆರಳಿದ್ದ ಶಿಕ್ಷಕಿ ಮೇಲೆ ಬೀದಿ ನಾಯಿ ದಾಳಿ ನಡೆಸುದ್ದು, ಮಾರಣಾಂತಿಕವಾಗಿ ಕಚ್ಚಿ ಗಾಯಗೊಳಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಬೇಲೂರಿನಲ್ಲಿ ಈ ಘಟನೆ ನಡೆದಿದೆ. ಬೇಲೂರಿನ ಜಿಹೆಚ್ ಪಿಎಸ್ ಶಾಲೆಯ ಶಿಕ್ಷಕಿ ಚಿಕ್ಕಮ್ಮ ಎಂಬುವವರು ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದರು. ಮನೆಯೊಂದರ ಬಳಿ ತೆರಳುತ್ತಿದ್ದ ಶಿಕ್ಷಕಿ ಮೇಲೆ ಬೀದಿನಾಯಿಯೊಂದು ಏಕಾಏಕಿ ದಾಳಿ ನಡೆಸಿದೆ. ಶಿಕ್ಷಕಿಯ ಮುಖ, ಕೈ-ಕಾಲುಗಳನ್ನು ಕಚ್ಚಿ ಗಾಯಗೊಳಿಸಿದೆ. ಶಿಕ್ಷಕಿ ರಕ್ಷಿಸಲು ಬಂದ ಆಕೆಯ ಪತಿ ಹಾಗೂ ಓರ್ವ ಬಾಲಕ ಹಾಗೂ ಏಳು ಜನರ ಮೇಲೂ ನಾಯಿ ದಾಳಿ ನಡೆಸಿದೆ.
ಗಂಭೀರವಾಗಿ ದಾಳಿಗೊಳಗಾಗಿರುವ ಶಿಕ್ಷಕಿ, ಬಾಲಕ ಹಾಗೂ ಏಳು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.