Belagavi NewsBelgaum NewsKannada NewsKarnataka News

ಡಾ.ಪ್ರಭಾಕರ ಕೋರೆ 77: ಗುರುವಾರ ‘ಸಮಾಜಭೂಷಣ’ ಗ್ರಂಥ ಲೋಕಾರ್ಪಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಡಾ.ಪ್ರಭಾಕರ ಕೋರೆಯವರ 77ನೇ ಜನ್ಮದಿನದ ನಿಮಿತ್ತ  ಅಭಿಮಾನಿಗಳು ಮಹಾಲಿಂಗಪುರದ ಡಾ.ಅಶೋಕ ನರೋಡೆ ಸಂಪಾದಿತ ‘ಸಮಾಜಭೂಷಣ’ ಅಭಿನಂದನ ಗ್ರಂಥ ಲೋಕಾರ್ಪಣೆ ಸಮಾರಂಭವನ್ನ ಗುರುವಾರ ಬೆಳಗಾವಿಯ ಚನ್ನಮ್ಮ ಸರ್ಕಲ್ ಬಳಿಯ ಕನ್ನಡ ಸಾಹಿತ್ಯ ಭವನದಲ್ಲಿ ಸಂಜೆ ೫ ಗಂಟೆಗೆ ಹಮ್ಮಿಕೊಂಡಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಖ್ಯಾತ ವೈದ್ಯ ಡಾ.ಎಚ್.ಬಿ.ರಾಜಶೇಖರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೆಎಲ್‌ಇ ಸಂಸ್ಥೆಯ ನಿವೃತ್ತ ಕಾರ್ಯದರ್ಶಿ  ಡಾ.ಎಫ್.ವ್ಹಿ.ಮಾನ್ವಿ ಆಗಮಿಸಲಿದ್ದು, ಗ್ರಂಥವನ್ನು ಬೆಳಗಾವಿ ವಿಭಾಗದ ನಿವೃತ್ತ ಪ್ರಾದೇಶಿಕ ಆಯುಕ್ತ ಐಎಎಸ್ ಅಧಿಕಾರಿ ಎಂ.ಜಿ.ಹಿರೇಮಠ ಲೋಕಾರ್ಪಣೆ ಮಾಡಲಿದ್ದಾರೆ.

ಖ್ಯಾತ ವೈದ್ಯ ಡಾ.ಝಡ್.ಎಫ್. ಹಫೀಜ್, ಡಾ.ಎಂ.ವ್ಹಿ.ಜಾಲಿ, ಹಿರಿಯ ಸಾಹಿತಿ ಡಾ.ಸರಜೂ ಕಾಟಕರ ಅಭಿನಂದನ ನುಡಿಗಳನ್ನಾಡಲಿದ್ದಾರೆ ಎಂದು ಸಮಾರಂಭದ ಸಂಯೋಜಕರಾದ ಪ್ರಾ.ಬಿ.ಎಸ್. ಗವಿಮಠ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button