Belagavi NewsBelgaum NewsKarnataka NewsLatest
*ಗಾನಗಂಧರ್ವ ಡಾ. ರಾಜ್ ಕುಮಾರ್ ಅವರಿಗೆ ಸಮರ್ಪಿತ “ಗಾನ ವೈಭವ” ಕರೋಕೆ ಕಾರ್ಯಕ್ರಮ: ಮೇ 10ರಂದು ಬೆಳಗಾವಿಯಲ್ಲಿ*

ಪ್ರಗತಿವಾಹಿನಿ ಸುದ್ದಿ: ಕನ್ನಡ ಚಲನಚಿತ್ರರಂಗದ ಅಮರ ಗಾನಗಂಧರ್ವ, ನಟಸಾರ್ವಭೌಮ ಡಾ. ರಾಜ್ ಕುಮಾರ್ ಅವರ ಸ್ಮರಣಾರ್ಥ ಸುಮಧುರ ಕನ್ನಡ ಹಾಡುಗಳ ಕರೋಕೆ ಕಾರ್ಯಕ್ರಮ “ಗಾನ ವೈಭವ”ವನ್ನು ಎಸ್. ಬಿ. ಕರೋಕೆ ತಂಡ ಆಯೋಜಿಸಿದೆ.
ಈ ಸಂಗೀತ ವೈಭವ ಕಾರ್ಯಕ್ರಮವು ಮೇ 10, 2026ರಂದು ಸಂಜೆ 5 ಗಂಟೆಗೆ ನಗರದ ಲೋಕಮಾನ್ಯ ರಂಗಮಂದಿರ (ಹಳೆ ರೀಝ್ ಥಿಯೇಟರ್), ಕೊನವಾಳ ಗಲ್ಲಿಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ವೇಣುನಾದ ತಂಡದ ಪ್ರತಿಭಾವಂತ ಹಾಡುಗಾರರು ಮತ್ತು ಹಾಡುಗಾರ್ತಿಯರು ಡಾ. ರಾಜ್ ಕುಮಾರ್ ಅವರ ಅಮರ ಗೀತೆಗಳನ್ನು ಕರೋಕೆ ಮೂಲಕ ಪ್ರಸ್ತುತಪಡಿಸಲಿದ್ದಾರೆ.
ಕನ್ನಡ ಸಂಗೀತಾಭಿಮಾನಿಗಳಿಗೆ ಇದು ಅಪರೂಪದ ರಸದೌತಣವಾಗಲಿದೆ.
ಪ್ರವೇಶ ಉಚಿತವಾಗಿದ್ದು, ಎಲ್ಲ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.




