Kannada NewsKarnataka NewsLatest
*ಮಹಿಳೆಯೊಂದಿಗೆ ಅಸಭ್ಯ ವರ್ತನೆ: ತಮ್ಮೇನಹಳ್ಳಿ ಸ್ವಾಮೀಜಿಯನ್ನು ಹಿಡಿದು ಥಳಿಸಿದ ಜನರು*

ಪ್ರಗತಿವಾಹಿನಿ ಸುದ್ದಿ: ಮಹಿಳೆಯೊಂದಿಗೆ ಸ್ವಾಮೀಜಿಯೊಬ್ಬರು ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಸಾರ್ವಜನಿಕರು ಹಾಗೂ ಮಹಿಳೆಯ ಸಂಬಂಧಿಗಳು ಆರೋಪಿ ಸ್ವಾಮೀಜಿಯನ್ನು ಹಿಡಿದು ಥಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ತಮ್ಮೇನಹಳ್ಳಿ ಮಠದ ಜಮ್ಮಣ್ಣ ಸ್ವಾಮೀಜಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಬಳ್ಳಾರಿ ಮೂಲದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಇದೇ ವಿಚಾರವಾಗಿ ಮಹಿಳೆ ಸಂಬಂಧಿಕರು ಸ್ವಾಮಿಜಿಯನ್ನು ಹಿಡಿದು ಗೂಸಾ ನೀಡಿದ್ದಾರೆ.
ಜಮ್ಮಣ್ಣ ಸ್ವಾಮೀಜಿ ವಾಮಾಚಾರ, ಅನಾರೋಗ್ಯ ನಿವಾರಣೆ ಎಂದು ಜನರಿಗೆ ವಂಚಿಸುತ್ತಿದ್ದಾರೆ ಎಂಬ ಆರೋಪ ಕೂಡ ಕೇಳಿಬಂದಿದೆ. ಈಗ ಮಹಿಳೆಗೆ ಕಿರುಕುಳ ನೀಡಿ ಜನರಿಂದ ಹಿಗ್ಗಾ ಮುಗ್ಗಾ ಏಟು ತಿಂದಿದ್ದಾರೆ.




