ದೂರವಾಣಿ ಸಂಪರ್ಕಕ್ಕೆ ಸಿಕ್ಕಿದ ಕಾರವಾರ ಡಿಎಸ್ಪಿ ಶಂಕರ ಮಾರಿಹಾಳ

ದೂರವಾಣಿ ಸಂಪರ್ಕಕ್ಕೆ ಸಿಕ್ಕಿದ ಕಾರವಾರ ಡಿಎಸ್ಪಿ ಶಂಕರ ಮಾರಿಹಾಳ

ಪ್ರಗತಿವಾಹಿನಿ ಸುದ್ದಿ, ಕಾರವಾರ- 

ಸೆಟ್ ಲೈಟ್ ದೂರವಾಣಿ ಕರೆಯೊಂದರ ತನಿಖೆಗೆ ತೆರಳಿ, ಕಾರವಾರ -ಅಂಕೋಲಾ -ಯಲ್ಲಾಪುರ ಕಾಡಿನ ಮಧ್ಯೆ ನಾಪತ್ತೆಯಾಗಿದ್ದ ಕಾರವಾರ ಡಿವೈ ಎಸ್ಪಿ ಶಂಕರ ಮಾರಿಹಾಳ ದೂರವಾಣಿ ಸಂಪರ್ಕ ಸಾಧ್ಯವಾಗಿದೆ.

ಸುಮಾರು 20 ಗಂಟೆ ನಂತರ ಶಂಕರ ಮಾರಿಹಾಳ ಸಂಪರ್ಕಕ್ಕೆ ಲಭ್ಯವಾಗಿದ್ದು, ಕುಟುಂಬ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ್ದಾರೆ. ಶಂಕರ ಮಾರಿಹಾಳ ಜೊತೆಗೆ ಭಟ್ಕಳದ ಆಂತರಿಕ ಭದ್ರತಾ ಇನಸ್ಪೆಕ್ಟರ್ ನಿಶ್ಚಲ ಕುಮಾರ ಮತ್ತು ಇನ್ನೋರ್ವ ಕಾನಸ್ಟೆಬಲ್ ಸಹ ಇದ್ದರು.

ಪಾಕಿಸ್ತಾನದೊಂದಿಗೆ ಸೆಟಲೈಟ್ ದೂರವಾಣಿ ಮೂಲಕ ಮಾತಿನಾಡಿದ್ದ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲು ಮಾರಿಹಾಳ ಮತ್ತು ಇತರ ಅಧಿಕಾರಿಗಳು ತೆರಳಿದ್ದರು. ಅರಣ್ಯ ಮಧ್ಯೆ ದಾರಿ ತಪ್ಪಿಸಿಕೊಂಡಿದ್ದರೆನ್ನಲಾಗಿದೆ.

ನಿನ್ನೆ ಸಂಜೆಯಿಂದಲೇ ಅವರಿಗಾಗಿ ತೀವ್ರ ಶೋಧ ನಡೆದಿತ್ತು. ಮೊಬೈಲ್ ಕೂಡ ಸಂಪರ್ಕಕ್ಕೆ ಲಭ್ಯವಾಗಿರವಲಿಲ್ಲ. ಇಂದು ನಸುಕಿನಲ್ಲಿ ಮೊಬೈಲ್ ಸಂಪರ್ಕ ಸಾಧ್ಯವಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ಬರಬೇಕಿದೆ.

ಸಂಬಂಧಿಸಿದ ಸುದ್ದಿ – ಕಾರವಾರ ಡಿಎಸ್ಪಿ ಶಂಕರ ಮಾರಿಹಾಳ ಮಿಸ್ಸಿಂಗ್?

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button