Belagavi NewsBelgaum NewsKannada NewsKarnataka News
ದೈವಜ್ಞ ಮಹಿಳಾ ಮಂಡಳದ ನೂತನ ಪದಾಧಿಕಾರಿಗಳ ಆಯ್ಕೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ಶಹಾಪುರದ ಮಹಾತ್ಮ ಫುಲೆ ರಸ್ತೆಯಲ್ಲಿರುವ ದೈವಜ್ಞ ಮಹಿಳಾ ಮಂಡಳದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ರಾಜಶ್ರೀ ಪ್ರದೀಪ್ ವೆರ್ಣೇಕರ, ಕಾರ್ಯದರ್ಶಿಯಾಗಿ ಐಶ್ವರ್ಯ ವೈಭವ್ ವೆರ್ಣೇಕರ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಮಿಲನ್ ಮದನ್ ಅಣ್ವೇಕರ್, ಉಪ ಕಾರ್ಯದರ್ಶಿಯಾಗಿ ನೇಹಾ ನಾಗೇಂದ್ರ ಪಾವಸ್ಕರ್, ಕೋಶಾಧಿಕಾರಿಯಾಗಿ ಮಂಗಲ್ ಸಂದೀಪ್ ವೆರ್ಣೇಕರ್ ಹಾಗೂ ಉಪ ಖಜಾಂಚಿಯಾಗಿ ಮೇಘನಾ ಮಂಜುನಾಥ ವೆರ್ಣೇಕರ್ ಆಯ್ಕೆಯಾಗಿದ್ದಾರೆ.




