Latest

ಫ್ರಿಜ್ ಶಾಕ್ ತಗುಲಿ ಬಾಲಕ ಸಾವು

ಪ್ರಗತಿವಾಹಿನಿ ಸುದ್ದಿ, ಸುಳ್ಯ: ಫ್ರಿಜ್ ಮುಟ್ಟಿದ ಬಾಲಕನೊಬ್ಬ ವಿದ್ಯುತ್ ಶಾಕ್  ತಗುಲಿ ಮೃತಪಟ್ಟಿದ್ದಾನೆ.

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣೆ ವ್ಯಾಪ್ತಿಯ ಐವರ್ನಾಡಿ ಕೈಯಲ್ ತಡ್ಕ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಪುತ್ತೂರು ತಾಲೂಕಿನ ಕೆಂದಂಬಾಡಿ ಗ್ರಾಮದ ಸನ್ಯಾಸಿಗುಡ್ಡೆ ನಿವಾಸಿ ಹೈದರ್ ಅಲಿ ಹಾಗೂ ಆಪ್ಸಾ ದಂಪತಿಯ ಪುತ್ರ ಆದಿಲ್ (6) ಮೃತಪಟ್ಟ ಬಾಲಕ.

ಈತ ತನ್ನ ಅಜ್ಜಿಮನೆಯಾದ  ಕೈಯಲ್ ತಡ್ಕಕ್ಕೆ ಬಂದಿದ್ದು ಮನೆಯಲ್ಲಿದ್ದ ಹಳೆಯ ಫ್ರಿಜ್ ಮುಟ್ಟಿದ ತಕ್ಷಣ ಅದರಿಂದ ಶಾಕ್  ತಗುಲಿ ಪ್ರಜ್ಞಾಹೀನನಾಗಿ ಬಿದ್ದಿದ್ದ.  ಆತನ ಎಡಗೈ ಚರ್ಮ ಸಂಪೂರ್ಣ ಕರಕಲಾಗಿತ್ತು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಈ ಕುರಿತು ಬಾಲಕನ ತಂದೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Home add -Advt

ಲೇಡಿ ಕಾನ್ಸ್ ಟೇಬಲ್ ಮೇಲೆ ಹಲ್ಲೆ; ಕರ್ನಾಟಕ ಮೂಲದ ನಟಿ ಬಂಧನ

 

Related Articles

Back to top button