Latest

IPS ಅಧಿಕಾರಿ ಎಂದು ನಂಬಿಸಿ ಬರೋಬ್ಬರಿ 2.5 ಕೋಟಿ ವಂಚಿಸಿದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಂಬಿಸಿ ವಂಚನೆ ಮಾಡುವವರ ಸಂಖ್ಯೆ ಹೆಚ್ಚುತ್ತಿದ್ದು, ಇಲ್ಲೋರ್ವ ಭೂಪ ಐಪಿಎಸ್ ಅಧಿಕಾರಿ ಎಂದು ಹೇಳಿಕೊಂಡು ವ್ಯಕ್ತಿಯೋರ್ವರಿಗೆ 2.5 ಕೋಟಿ ವಂಚನೆ ಮಾಡಿದ್ದಾನೆ.

Home add -Advt

ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶ್ರೀನಿವಾಸ್ ಎಂಬಾತನ ವಿರುದ್ಧ ಕೇಸ್ ದಾಖಲಾಗಿದೆ. ಪೊಲೀಸರು ಆರೋಪಿ ಶ್ರೀನಿವಾಸ್ ಗಾಗಿ ಹುಡುಕಾಟ ನಡೆಸಿದ್ದಾರೆ.

ತಾನು ಐಪಿಎಸ್ ಅಧಿಕಾರಿ ಎಂದು ಹೇಳುತ್ತ ಪ್ರೊಬೇಷನರಿ ಎಸ್ ಪಿ ಎಂದು ಕೆಲ ಪೊಲೀಸ್ ಠಾಣೆಗಳಿಗೂ ಭೇಟಿ ನೀಡಿದ್ದನಂತೆ. ಸಧ್ಯ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದೇನೆ.
ಮೈಸೂರಿನಲ್ಲಿ 450 ಕೋಟಿ ಲ್ಯಾಂಡ್ ವ್ಯವಹಾರವಿದೆ. ಅದು ಡೀಲ್ ಆದರೆ 250 ಕೋಟಿ ಸಿಗುತ್ತೆ. ಸಧ್ಯ ಒಂದಿಷ್ಟು ಹಣ ಬೇಕು ಎಂದು ವ್ಯಕ್ತಿಯೋರ್ವರಿಂದ ಹಂತ ಹಂತವಾಗಿ 2.5 ಕೋಟಿ ಪಡೆದು ವಾಪಸ್ ಕೊಡದೇ ವಂಚಿಸಿದ್ದಾನೆ.

ವಂಚನೆಗೊಳಗಾದವರು ತಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Related Articles

Back to top button