
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು- : ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ‘ರಾಷ್ಟ್ರೀಯ ಯುವಮೊರ್ಚಾ ಅಧ್ಯಕ್ಷ ಪದವಿ ಅಲಂಕರಿಸಿದ ಸಲುವಾಗಿ ‘ಪ್ರಧಾನಮಂತ್ರಿ ಜನ ಕಲ್ಯಾಣಕಾರಿ ಯೋಜನಾ ಪ್ರಚಾರ ಪ್ರಸಾರ ಅಭಿಯಾನ’ದ ವತಿಯಿಂದ ಅವರನ್ನು ಸನ್ಮಾನಿಸಲಾಯಿತು.

ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಗಳನ್ನು ಸಮಾಜದ ತಳಮಟ್ಟದ ಪ್ರಜೆಯವರೆಗೆ ಮುಟ್ಟಿಸುವ ಅದಮ್ಯ ಜವಾಬ್ದಾರಿ ‘ಪ್ರಧಾನಮಂತ್ರಿ ಜನ ಕಲ್ಯಾಣಕಾರಿ ಯೋಜನಾ ಪ್ರಚಾರ ಪ್ರಸಾರ ಅಭಿಯಾನ’ದ ಹೆಗಲ ಮೇಲಿದೆ. ಈ ಜವಾಬ್ದಾರಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ ಎಂದು ಶುಭ ಕೋರಿದರು.
ಈ ಸಭೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿ ಜನ ಕಲ್ಯಾಣಕಾರಿ ಯೋಜನಾ ಪ್ರಚಾರ ಪ್ರಸಾರ ಅಭಿಯಾನದ ರಾಜ್ಯ ಅಧ್ಯಕ್ಷರಾದ ಅಮಿತಾ ಪಾಂಡೆ, “ತೇಜಸ್ವಿ ಸೂರ್ಯರವರನ್ನು ನೋಡಿದಾಗ ನನ್ನ ಮಾತೃತ್ವ ಉಕ್ಕಿಬರತ್ತೆ, ಇಂಥ ಮಗನನ್ನು ಪಡೆದ ತೇಜಸ್ವಿಯವರ ತಾಯಿ ನಿಜಕ್ಕೂ ಪುಣ್ಯವಂತರು, ಇವರ ಉತ್ಸಾಹ ನೇರನುಡಿ ಮತ್ತು ನಾಯಕತ್ವದ ಗುಣಗಳನ್ನು ನೋಡುತ್ತಿದ್ದರೆ, ಭವಿಷ್ಯದಲ್ಲಿ ಇವರನ್ನು ಇನ್ನೂ ಅತಿದೊಡ್ಡ ಸ್ಥಾನದಲ್ಲಿ ನೋಡಬೇಕೆನ್ನುವ ಆಸೆ ಮೂಡುತ್ತಿದೆ. ಭಾರತಾಂಬೆಯ ಕೃಪಾರ್ಶಿವಾದ ತೇಜಸ್ವಿ ಸೂರ್ಯರವರ ಮೇಲಿರಲಿ ಮತ್ತು ಅವರು ರಾಷ್ಟ್ರಮಟ್ಟದಲ್ಲಿ ಇನ್ನೂ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿ ತಮ್ಮ ಕ್ಷೇತ್ರ ಮತ್ತು ಕ್ಷೇತ್ರದ ಜನರ ಅಭಿವೃದ್ಧಿಗೆ ಒತ್ತಾಸೆಯಾಗಲಿ ಎಂದು ಹಾರೈಸುತ್ತೇನೆ” ಎಂದರು.
ಪ್ರಧಾನಮಂತ್ರಿ ಜನ ಕಲ್ಯಾಣಕಾರಿ ಯೋಜನ ಪ್ರಚಾರ ಪ್ರಸಾರ ಅಭಿಯಾನದ ರಾಷ್ಟ್ರೀಯ ಅಧ್ಯಕ್ಷ ಪುಶೇಷ್ ಆತ್ರೇಯ, ರಾಷ್ಟೀಯ ಸಂಘಟನ ಕಾರ್ಯಕಾರಿ ಶಶಾಂಕ್ ಚೋಪಡ, ರಾಷ್ಟ್ರೀಯ ಪದಾಧಿಕಾರಿಗಳು ಮತ್ತು ಸದಸ್ಯರು ವೀಡಿಯೋ ಕಾನ್ಫರೆಂಸ್ ಮೂಲಕ ಹಾಜರಿದ್ದರು ಮತ್ತು ರಾಜ್ಯದ ಸಂಘಟನಾ ಕಾರ್ಯಕಾರಿ ದಿನೇಶ್ ಹರ್ದಿಕ್ ಪಟೇಲ್, ಕಾರ್ಯದರ್ಶಿಗಳಾದ ಭರತ್ಕುಮಾರ್, ಯುವಾಧ್ಯಕ್ಷರಾದ ಕೌಶಲ್ ಜೈನ್, ಐ.ಟಿ. ಸೆಲ್ ಮುಖ್ಯಸ್ಥರಾದ ಲಲಿತ್ ಡಾಖಾಲಿಯಾ, ಗ್ರಾಮಾಂತರ ಅಧ್ಯಕ್ಷರಾದ ರಘುಪತಿ ನಾಯ್ಡು, ಬೆಂಗಳೂರು, ಮಾಧ್ಯಮ ಸದಸ್ಯರಾದ ಮುರಳಿ ಸಭೆಯಲ್ಲ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ