Belagavi NewsBelgaum NewsKannada NewsKarnataka NewsPolitics

*ಲಕ್ಷ್ಮೀ ತಾಯಿ ಫೌಂಡೇಶನ್ ನಿಂದ ಆರ್ಥಿಕ ನೆರವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಮಾರಿಹಾಳ ಗ್ರಾಮದ ಬಾಲಕಿಗೆ ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.

ನಾಗರತ್ನ ಫಕೀರಪ್ಪ ಬಳ್ಳೊಡಿ ಇವರ 5 ವರ್ಷದ ಪುಟ್ಟ ಮಗ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಆರ್ಥಿಕ ನೆರವಿನ ಅಗತ್ಯವಿದ್ದ ಕಾರಣ ಪುಟ್ಟ ಕಂದನ ನೋವಿಗೆ ಸ್ಪಂದಿಸಿ, ಲಕ್ಷ್ಮೀ ತಾಯಿ ಫೌಂಡೇಶನ್ ವತಿಯಿಂದ ಕುಟುಂಬಕ್ಕೆ ವಿಧಾ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಚೆಕ್ ವಿತರಿಸಿದರು.

Home add -Advt

ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ನಾವಿದ್ದೇವೆ ಎಂಬ ಭರವಸೆಯೊಂದಿಗೆ ಪೋಷಕರಿಗೆ ಧೈರ್ಯ ತುಂಬಿದರು. ಆ ಪುಟ್ಟ ಕಂದ ಶೀಘ್ರವಾಗಿ ಗುಣಮುಖನಾಗಲಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಪ್ರಾರ್ಥಿಸಿದ್ದಾರೆ.

Related Articles

Back to top button