Karnataka News

*9 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಬಾವಿ ತೋಡಲು ಬಂದಿದ್ದ ಕಾರ್ಮಿಕನಿಂದ ಕೃತ್ಯ*

ಪ್ರಗತಿವಾಹಿನಿ ಸುದ್ದಿ: 9 ವರ್ಷದ ಬಾಲಕಿ ಮೇಲೆ ವ್ಯಕ್ತಿಯೋರ್ವ ಅತ್ಯಾಚಾರವೆಸಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ವೆಟ್ರಿವಲ್ (28) ಎಂಬಾತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದು, ಕೃತ್ಯದ ಬಳಿಕ ಪರಾರಿಯಾಗಿದ್ದಾರೆ. ಬಾಲಕಿ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಾವಿ ತೋದುವ ಕೆಲಸಕ್ಕೆಂದು ತಮಿಳುನಾಡಿನ ಆರಮಂಗಲ ಗ್ರಾಮದಿಂದ ಬಂದಿದ್ದ ಕಾಮುಕ ಬಾಲಕಿಯನ್ನು ಪುಸಲಾಯಿಸಿ ಕೃತ್ಯವೆಸಗಿದ್ದಾನೆ. ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

Home add -Advt

Related Articles

Back to top button