
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಖ್ಯಾತ ಉದ್ಯಮಿ ಆರ್.ಎನ್.ಶೆಟ್ಟಿ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಇಂದು ಬೆಳಗಿನ ಜಾವ 3.30ಕ್ಕೆ ಅವರು ಹೃದಯಾಘಾತದಿಂದ ನಿಧನರಾದರು.
ಮೂಲತಃ ಉತ್ತರ ಕನ್ನಡ ಜಿಲ್ಲೆ ಮುರಡೇಶ್ವರದವರಾಗಿದ್ದ ಅವರು ಉದ್ಯಮಿಯಾಗಿ, ಶಿಕ್ಷಣ ತಜ್ಞರಾಗಿ, ಕೊಡುಗೈ ದಾನಿಗಳಾಗಿ, ಧಾರ್ಮಿಕ ಮುಂದಾಳುವಾಗಿ ಹೆಸರು ಮಾಡಿದ್ದರು. 1967ರಲ್ಲಿ ಆರ್.ಎನ್.ಶೆಟ್ಟಿ ಆ್ಯಂಡ್ ಕಂಪನಿ ಸ್ಥಾಪಿಸಿ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದರು.
ಆರ್.ಎನ್.ಶೆಟ್ಟಿ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವರು ಶೋಖ ವ್ಯಕ್ತಪಡಿಸಿದ್ದಾರೆ.