Kannada NewsKarnataka NewsLatest

ಬೆಳಗಾವಿಗೆ ಬುಧವಾರ ಗೋಪಾಲಜೀ

 ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ  –
ಬೆಳಗಾವಿಯ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದ ವತಿಯಿಂದ ಅ. 5 ರಂದು ಬೆಳಗ್ಗೆ 10 ಗಂಟೆಗೆ ಸಮರಸತಾ ಭವನದಲ್ಲಿ ಆಯುಧ ಪೂಜೆ ಹಮ್ಮಿಕೊಳ್ಳಲಾಗಿದೆ.
ಆಯುಧ ಪೂಜೆಯಲ್ಲಿ ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಸಹ ಕಾರ್ಯದರ್ಶಿ ಹಾಗೂ ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲಜಿ ಉಪಸ್ಥಿತರಿರುತ್ತಾರೆ.
ಅಲ್ಲದೇ, ಬೆಳಗಾವಿಯ ಗೂಡ್ ಶೆಡ್ ರಸ್ತೆಯ ಸಂಘ ಸದನ ಕಾರ್ಯಾಲಯದಲ್ಲಿ ಬುಧವಾರ  ಸಂಜೆ 7 ಗಂಟೆಗೆ ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಶ್ರೀ ರಾಮ ಮಂದಿರದ ಪ್ರತ್ಯಕ್ಷ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಗೋಪಾಲಜಿ ಅವರು ವಕ್ತಾರರಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಬೆಳಗಾವಿಯ ವಿಶ್ವ ಹಿಂದೂ ಪರಿಷತ್ ಪ್ರಕಟಣೆಯಲ್ಲಿ ತಿಳಿಸಿದೆ.

https://pragati.taskdun.com/latest/dakshina-kannadapfiworningrss/

 

Related Articles

Back to top button