Politics

*ಪೊಲೀಸರ ಮುಂದೆ ಶರಣಾಗು; ಇದು ನಿನಗೆ ಎಚ್ಚರಿಕೆ… ಇಲ್ಲವಾದಲ್ಲಿ ಕುಟುಂಬದ ಕೋಪ ಎದುರಸಬೇಕಾಗುತ್ತೆ; ಪ್ರಜ್ವಲ್ ಗೆ ಹೆಚ್.ಡಿ.ದೇವೇಗೌಡ ವಾರ್ನಿಂಗ್*

ಪ್ರಗತಿವಾಹಿನಿ ಸುದ್ದಿ: ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ದೇಶಕ್ಕೆ ವಾಪಾಸ್ ಬಂದು ಪೊಲೀಸರಿಗೆ ಶರಣಾಗುವಂತೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಪ್ರಜ್ವಲ್ ಗೆ ವಾರ್ನಿಂಗ್ ಕೊಟ್ಟಿದ್ದಾರೆ.

ಪ್ರಜ್ವಲ್ ಗೆ ಬಹಿರಂಗ ಪತ್ರದ ಮೂಲಕ ಸಂದೇಶ ರವಾನಿಸಿರುವ ಹೆಚ್.ಡಿ.ದೇವೇಗೌಡ, ಪ್ರಜ್ವಲ್ ರೇವಣ್ಣ ನೀನು ಎಲ್ಲೇ ಇದ್ದರೂ ಬಂದು ಪೊಲೀಸರಿಗೆ ಶರಣಾಗು. ಯಾವುದೇ ಮುಲಾಜಿಲ್ಲದೇ, ಮರ್ಜಿ ಇಲ್ಲದೇ ಬಂದು ಶರಣಾಗು. ನಿನ್ನ ಮೇಲಿರುವ ಆರೋಪ ಎದುರಿಸಲು ಕಾನೂನು ಇದೆ. ನನ್ನ ಮೇಲೆ ಗೌರವವಿದ್ದರೆ ಬಂದು ವಿಚಾರಣೆ ಎದುರಿಸು ಎಂದು ಖಡಕ್ ಸೂಚನೆ ನೀಡಿದ್ದಾರೆ.

ಎಲ್ಲೇ ಇದ್ದರು ಬಂದು ವಿಚಾರಣೆ ಎದುರಿಸು. ಇದು ನಾನು ನಿನಗೆ ಕೊಡುತ್ತಿರುವ ಎಚ್ಚರಿಕೆ. ಈ ಎಚ್ಚರಿಕೆಗೆ ಮನ್ನಣೆ ಕೊಡದಿದ್ದರೆ ನೀನು ನನ್ನ ಹಾಗೂ ಕುಟುಂಬಸ್ಥರ ಕೋಪವನ್ನು ಎದುರಿಸಬೇಕಾಗುತ್ತದೆ. ತಪ್ಪು ಎಸಗಿದ್ದಾನೆ ಎನ್ನುವುದನ್ನು ತೀರ್ಮಾನಿಸಲು ಕಾನೂನು ಇದೆ. ಈ ಎಚ್ಚರಿಕೆಗೆ ತಲೆಬಾಗದಿದ್ದಲ್ಲಿ ಮನೆಯವರ ಕಣ್ಣಲ್ಲಿ ಏಕಾಂಗಿಯಾಗುವುದರಲ್ಲಿ ಸಂದೇಹವಿಲ್ಲ. ನನ್ನ ಬಗ್ಗೆ ಗೌರವವಿದ್ದರೆ ಕೂಡಲೇ ಹಿಂದುರಿಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಇನ್ನು ಪ್ರಕರಣದಲ್ಲಿ ನಾನಾಗಲಿ, ನನ್ನ ಕುಟುಂಬವಾಗಲಿ ಹಸ್ತಕ್ಷೇಪ ಮಾಡಲ್ಲ. ಯಾವುದೇ ಭಾವನೆಗೆ ಸಿಲುಕದೇ ಆತ ತಪ್ಪು ಮಾಡಿದ್ದಾನೆ ಎಂದಾದರೆ ಅವನು ಎಸಗಿದ್ದಾನೆ ಎನ್ನಲಾದ ಕೃತ್ಯಗಳು ಮತ್ತು ತಪ್ಪುಗಳಿಂದ ನೊಂದಿರುವ ಅನ್ಯಾಯಕ್ಕೆ ಒಳಗಾಗಿರುವ ಎಲ್ಲರಿಗೂ ನ್ಯಾಯ ಸಿಗುವುದಷ್ಟೇ ನನಗೆ ಮುಖ್ಯ. ಜನರ ವಿಶ್ವಾಸವನ್ನು ಮರಳಿ ಪಡೆಯುವುದಷ್ಟೇ ನನ್ನ ಗುರಿ. 6 ದಶಕಗಳ ಕಾಲ ಜನರು ನನ್ನ ಜೊತೆ ನಿಂತಿದ್ದಾರೆ ಅವರಿಗೆ ನಾನು ಋಣಿ ಹಾಗೂ ನಾನು ಬದುಕಿರುವವರೆಗೂ ಅವರ ಹಿತದ ವಿರುದ್ಧ ನಡೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

Related Articles

Back to top button