Latest

ಗುಂಡಿಟ್ಟು ಕೆಇಬಿ ನೌಕರನ ಬರ್ಬರ ಹತ್ಯೆ

ಪ್ರಗತಿವಾಹಿನಿ ಸುದ್ದಿ; ಹಾಸನ: ದುಷ್ಕರ್ಮಿಗಳು ಕೆಇಬಿ ನೌಕರನೊಬ್ಬನನ್ನು ಗುಂಡು ಹತ್ಯೆಗೈದು ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆ ಹೂವಿನಹಳ್ಳಿ ಕಾವಲು ಬಳಿ ನಡೆದಿದೆ.

ಸಂತೋಷ್ (36) ಮೃತ ನೌಕರ. ಹೂವಿನಹಳ್ಳಿ ಬಳಿಯ ಜಮೀನಿನಲ್ಲಿ ಸಂತೋಷ್ ಮೃತದೇಹ ಪತ್ತೆಯಾಗಿದೆ.

ಮೃತದೇಹದ ಬಳಿ ಮದ್ಯದ ಬಾಟಲಿ, ಊಟ ಪತ್ತೆಯಾಗಿದ್ದು ಕೊಲೆಗೂ ಮುನ್ನ ಹಂತಕರು ಭರ್ಜರಿ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಹಾಸನ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Home add -Advt

Related Articles

Back to top button