Kannada NewsKarnataka NewsLatest

ಉಚಿತ ಡಾಕ್ಟರ್ ಗೆ ಹೆಬ್ಬಾಳಕರ್ ಸನ್ಮಾನ

ಅವರಿಗೆ ನನ್ನದೊಂದು ಸಲಾಂ ಎಂದ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಯಾರಿಂದಲೂ ಒಂದು ರೂಪಾಯಿಯನ್ನೂ ತೆಗೆದುಕೊಳ್ಳದೆ ದಿನದ 24 ಗಂಟೆಯೂ ಜನರಿಗೆ ಸೇವೆ ಸಲ್ಲಿಸುತ್ತಿರುವ ಅಪರೂಪದ ವೈದ್ಯರೊಬ್ಬರನ್ನು ಶನಿವಾರ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಪರವಾಗಿ ಪುತ್ರ ಮೃಣಾಲ ಹೆಬ್ಬಾಳಕರ್ ಸನ್ಮಾನಿಸಿದರು. 
ಕಂಗ್ರಾಳಿ ಬಿ‌ ಕೆ ಗ್ರಾಮದ ಚಿಕ್ಕ ಕೌಟುಂಬಿಕ ಹಿ​ನ್ನೆಲೆಯಿಂದ ಬಂದ ಡಾ​.​ ಶಂಕರ ಹುರುಡೆ​ ಕೊರೊನಾ ಸೋಂಕು ಬರುವುದಕ್ಕಿಂತ ಮುಂ​ಚಿನಿಂ​ದಲೂ ಉಚಿತ ಚಿಕಿತ್ಸೆಯನ್ನು ನೀಡುತ್ತಿ​ದ್ದಾರೆ.​
ಅ​ವರ ಸಾಮಾಜಿಕ ಹಾಗೂ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ​ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅನುಪಸ್ಥಿತಿಯಲ್ಲಿ​ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ,​ ಪುತ್ರ ಮೃಣಾಲ ಹೆಬ್ಬಾಳಕರ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳು ಅವರ ಕಾರ್ಯಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿ ಸನ್ಮಾನಿಸಿದರು.
​ ” ವೈ​ದ್ಯೋ​ ನಾ​ರಾ​ಯಣೋ ಹ​ರಿಃ” ಎನ್ನುವ ​ಮಾತಿನಂತೆ ಈ ವೈದ್ಯರು ಕಾರ್ಯನಿರತರಾಗಿದ್ದು, ಯಾರಿಂದಲೂ ಒಂದು ರೂಪಾಯಿಯ​ನ್ನೂ​ ​ತೆ​ಗೆದುಕೊಳ್ಳದೇ ಇರುವುದು ಅವರ ವ್ಯಕ್ತಿತ್ವದ ಹಿರಿಮೆ ಹಾಗೂ ಹೃದಯ ಶ್ರೀಮಂತಿಕೆಯನ್ನು ​ತೋರಿಸುತ್ತದೆ. ಅವರಿಗೆ ನನ್ನದೊಂದು ಸಲಾಂ ಎಂದು ಲಕ್ಷ್ಮಿ ಹೆಬ್ಬಾಳಕರ್ ತಿಳಿಸಿದ್ದಾರೆ.​

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button