Latest

ಗೃಹಸಚಿವರ ಎಸ್ಕಾರ್ಟ್ ವಾಹನ ಡಿಕ್ಕಿ; ಬೈಕ್ ಸವಾರ ಸಾವು

ಪ್ರಗತಿವಾಹಿನಿ ಸುದ್ದಿ, ಹಾಸನ: ಅರಸೀಕೆರೆ ತಾಲೂಕಿನ ಗಂಡಸಿ ಪೊಲೀಸ್ ಠಾಣೆ ಬಳಿಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಎಸ್ಕಾರ್ಟ್ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ.

ಚಿಕ್ಕ ಅರಸೀಕೆರೆ ಗ್ರಾಮದ ರಮೇಶ(45) ಮೃತಪಟ್ಟವರು. ಸಚಿವ ಅರಗ ಜ್ಞಾನೇಂದ್ರ ಅವರು ಮಲೆಮಹಾದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಮರಳುತ್ತಿದ್ದಾಗ ಅವರ ಪೊಲೀಸ್ ಎಸ್ಕಾರ್ಟ್ ವಾಹನ ಪೆಟ್ರೋಲ್ ಬಂಕ್ ನಿಂದ ಹೊರ ಬರುತ್ತಿದ್ದ ರಮೇಶ ಅವರ ವಾಹನಕ್ಕೆ ಬಡಿದು ಈ ಅವಘಡ ಸಂಭವಿಸಿತು.

Home add -Advt

ಅಪಘಾತ ಸ್ಥಳಕ್ಕೆ ಗಂಡಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತ ವ್ಯಕ್ತಿಯ ದೇಹವನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ.

*ರಾಜಹಂಸಗಡ ಕೋಟೆಯಲ್ಲಿ ಬೃಹತ್ ಶಿವಾಜಿ ಪ್ರತಿಮೆ ಅನಾವರಣ ಮಾಡಿದ ಸಿಎಂ*

https://pragati.taskdun.com/belagavirajahasagadashivaji-statuecm-basavaraj-bommai/

ಕರ್ನಾಟಕದಲ್ಲಿ ಕೇಸರಿ ಕಹಳೆ ಮೊಳಗಿಸಲು ರಾಜಕೀಯ ಚಾಣಕ್ಯ ಅಮಿತ್ ಶಾ ತಂತ್ರಗಾರಿಕೆ ಅನಿವಾರ್ಯ

https://pragati.taskdun.com/political-chanakya-amit-shah-strategy-is-indispensable-to-sound-the-saffron-trumpet-in-karnataka/

*ತಾಯಿ ಶವದೊಂದಿಗೆ 2 ದಿನ ಮನೆಯಲ್ಲೇ ಕಳೆದ ಬಾಲಕ*

https://pragati.taskdun.com/14-boymother-deadbody2-daysbangalore/

Related Articles

Back to top button