
ಪ್ರಗತಿವಾಹಿನಿ ಸುದ್ದಿ, ಕೃಷ್ಣಗಿರಿ (ತಮಿಳುನಾಡು) – ನನಗೆ ಆ ಯುವತಿ ಪರಿಚಯವಿಲ್ಲ, ಅದು ಅವರ ಪರ್ಸ್ನಲ್ ಪ್ರಾಬ್ಲಂ, ಅವರೇ ಬಗೆಹರಿಸಿಕೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಪ್ರತಿಕ್ರಿಯಿಸಿದ್ದಾರೆ.
ಸಿಡಿ ಯುವತಿಯ ಪೋಷಕರು ಮತ್ತು ಮಾಜಿ ಸಚಿವ ರಮೇಶ ಜಾರಕಿಹೊಳಿ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನನಗೆ ಆ ಯುವತಿಯ ಪರಿಚಯವೂ ಇಲ್ಲ. ಈ ಪ್ರಕರಣಕ್ಕೆ ಸಬಂಧವೂ ಇಲ್ಲ. ಅದು ಅವರ ಸಮಸ್ಯೆ, ಅವರೇ ಪರಿಹರಿಸಿಕೊಳ್ಳಲಿ ಎಂದು ಹೇಳಿದರು.
ರಮೇಶ ಜಾರಕಿಹೊಳಿ ದಿನಕ್ಕೊಂದು ಮಾತನಾಡುತ್ತಿದ್ದಾರೆ. ನಿನ್ನೆ ಒಂದು ಮಾತನಾಡಿದ್ದಾರೆ, ಇಂದು ಒಂದು ಮಾತನಾಡುತ್ತಿದ್ದಾರೆ. ನಾಳೆ ಇನ್ನೊಂದು ಮಾತನಾಡುತ್ತಾರೆ ಎಂದೂ ಅವರು ಹೇಳಿದರು.
ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ನಡೆಸಲಿ, ಏನು ಬರುತ್ತೋ ನೋಡೋಣ ಎಂದು ಡಿ.ಕೆ.ಶಿವಕುಮಾರ ಹೇಳಿದರು.
ಗೋಕಾಕಲ್ಲಿ ತಮ್ಮನನ್ನು ನಿಲ್ಲಿಸಿ, ಕನಕಪುರದಲ್ಲಿ ಡಿಕೆಶಿ ಸೋಲಿಸುತ್ತೇನೆ – ರಮೇಶ ಜಾರಕಿಹೊಳಿ
ಡಿಕೆಶಿ ನಮ್ಮ ಮಗಳನ್ನು ಒತ್ತೆಯಾಳು ಮಾಡಿದ್ದಾರೆ: ಯುವತಿಯ ಪೋಷಕರ ಗಂಭೀರ ಆರೋಪ