Latest

ಕಾಡೆಮ್ಮೆ ಬೇಟೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಮೈಸೂರು ಹಾಗೂ ವೀರಾಜಪೇಟೆ ರಸ್ತೆಗೆ ಹೊಂದಿಕೊಂಡಂತಿರುವ ಕಚುವಿನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಡೆಮ್ಮೆಯನ್ನು ಬೇಟೆಯಾಡಿ ಅದರ 4 ತೊಡೆಗಳು ಹಾಗೂ ಎಡ ದೇಹದ ಭಾಗಗಳನ್ನು ಕತ್ತರಿಸಿಕೊಂಡು ಪರಾರಿಯಾಗಿದ್ದ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳು ಕಚುವಿನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಅ.15ರಂದು ರಾತ್ರಿ ಒಟ್ಟು 9 ಜನ ಆರೋಪಿಗಳು ಸೇರಿ ಕಾಟಿಯನ್ನು ಭೇಟೆಯಾಡಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು.

Home add -Advt

ಕಾರ್ಯಾಚರಣೆಯನ್ನು ಕೈಗೊಂಡ ಅಧಿಕಾರಿಗಳಾದ ಉಪಾರಣ್ಯ ಸಂರಕ್ಷಣಾಧಿಕಾರಿ ಡಿ.ಎಸ್‌ ದಯಾನಂದ ಅವರ ಮಾರ್ಗದರ್ಶನದೊಂದಿಗೆ ಹುಣಸೂರು ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ರತನ್‌ ಕುಮಾರ್‌ ಹಾಗೂ ಆನೆ ಚೌಕೂರು ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳಾದ ಗಣರಾಜ ಪಟಗಾರ ಹಾಗೂ ಹುಣಸೂರು ವನ್ಯಜೀವಿ ವಲಯದ ಸಿಬ್ಬಂದಿಗಳು ವಿಶೇಷ ಹುಲಿ ಸಂರಕ್ಷಣಾ ಪಡೆಯ ಸಿಬ್ಬಂದಿಗಳೊಂದಿಗೆ ತನಿಖೆ ಕೈಗೊಂಡು ಘಟನೆಯ ಸಂಬಂಧ ಇಬ್ಬರು ಆರೋಪಿಗಳಾದ ಚಂದ್ರ ಅಲಿಯಾಸ್‌ ಕಾಟಿ ಚಂದ್ರ, ಅಶೋಕ್‌ ಲಕ್ಷಮೀಪುರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಉಳಿದ 7 ಜನ ಆರೋಪಿಗಳಾದ ಮನು,ಬೊಮ್ಮ, ಭರತ್‌, ಆನಂದ್‌, ಶೇಷಮ್ಮನ ಜಯ, ರಾಮಕೃಷ್ಣೆಗೌಡ, ಮಂಜು ಇವರುಗಳನ್ನು ಬಂಧಿಸಲು ಪ್ರಯತ್ನದಲ್ಲಿ ತೊಡಗಿದ್ದಾರೆ.

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಕುಟುಂಬ

https://pragati.taskdun.com/latest/three-mamberssuicidebangalore/

Related Articles

Back to top button