Kannada NewsLatestNational

*ಭಾರತದಲ್ಲಿನ 40 ರಾಜತಾಂತ್ರಿಕರ ವಾಪಾಸಾತಿಗೆ ಕೆನಡಾ ಕ್ಕೆ ಸೂಚನೆ*

ಪ್ರಗತಿವಾಹಿನಿ ನವದೆಹಲಿ: ಭಾರತದಿಂದ ಸುಮಾರು 40 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಲು. ಅಕ್ಟೋಬರ್ 10 ರ ಗಡುವನ್ನು ಭಾರತವು ನಿಗದಿಪಡಿಸಿದೆ ಎಂದು ಫೈನಾನ್ಷಿಯಲ್ ಟೈಮ್ಸ್‌ ವರದಿ ಮಾಡಿದೆ.

ವೈಮನಸ್ಸಿಗೆ ಹಿನ್ನೆಲೆ

ಕೆನಡಾವು ಭಾರತದಲ್ಲಿ 62 ರಾಜತಾಂತ್ರಿಕರನ್ನು ಹೊಂದಿದೆ ಮತ್ತು ಒಟ್ಟು 41 ರಷ್ಟು ಕಡಿಮೆಗೊಳಿಸಬೇಕು ಎಂದು ಭಾರತ ತಿಳಿಸಿದೆ ಎಂದು ಪತ್ರಿಕೆ ಹೇಳಿದೆ. ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತ ಸರ್ಕಾರದ ಕೈವಾಡವಿದೆ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇತ್ತೀಚೆಗೆ ಆರೋಪಿಸಿದ ನಂತರ ನವದೆಹಲಿ ಮತ್ತು ಒಟ್ಟಾವಾ ನಡುವಿನ ರಾಜತಾಂತ್ರಿಕ ಸಂಬಂಧವು ಹಳಸಲಾರಂಭಿಸಿದೆ.

Home add -Advt

ಭಾರತದಲ್ಲಿ ಗೊತ್ತುಪಡಿಸಿದ ಭಯೋತ್ಪಾದಕ ನಿಜ್ಜರ್ ನನ್ನು ಜೂನ್ 18 ರಂದು ಕೆನಡಾದ ಸರ್ರೆ, ಬ್ರಿಟಿಷ್ ಕೊಲಂಬಿಯಾದ ಗುರುದ್ವಾರದ ಹೊರಗೆ ಪಾರ್ಕಿಂಗ್ ಸ್ಥಳದಲ್ಲಿ ಗುಂಡಿಕ್ಕಿ ಕೊಂದಿದ್ದರು.

ಟ್ರುಡೊ, ಕೆನಡಾದ ಸಂಸತ್ತಿನಲ್ಲಿ ಚರ್ಚೆಯ ಸಂದರ್ಭದಲ್ಲಿ, ಕೆನಡಾದ ರಾಷ್ಟ್ರೀಯ ಭದ್ರತಾ ಅಧಿಕಾರಿಗಳು “ಭಾರತ ಸರ್ಕಾರದ ಏಜೆಂಟರು” ನಿಜ್ಜರ್ ಅವರ ಹತ್ಯೆಯನ್ನು ನಡೆಸಿದರು ಎಂದು ನಂಬಲು ಕಾರಣಗಳಿವೆ ಎಂದು ಆರೋಪಿಸಿದರು, ನಿಜ್ಜರ್ ಸರ್ರೆಯ ಗುರುನಾನಕ್ ಸಿಖ್ ಗುರುದ್ವಾರದ ಅಧ್ಯಕ್ಷನಾಗಿಯೂ ಸೇವೆಯಲ್ಲಿದ್ದನು.

Related Articles

Back to top button