Latest

ಚಾಲೇಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಇಂದ್ರಜಿತ್ ಹೊಸ ಬಾಂಬ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚಾಲೇಂಜಿಂಗ್ ಸ್ಟಾರ್ ದರ್ಶನ್ ಹೆಸರಲ್ಲಿ 25 ಕೋಟಿ ಸಾಲ ಪಡೆಯಲು ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನಿರ್ದೇಶಕ ಇಂದ್ರಜಿತ ಲಂಕೇಶ್ ಇದೀಗ ನಟ ದರ್ಶನ್ ವಿರುದ್ಧವೇ ಸಿಡಿದೆದ್ದಿದ್ದಾರೆ.

ಸಪ್ಲೈಯರ್ ಮೇಲೆ ಹಲ್ಲೆ ಹಾಗೂ ವಂಚನೆ ಪ್ರಕರಣವನ್ನು ತನಿಖೆಗೆ ಆದೇಶಿಸುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭೇಟಿಯಾಗಿ ಮನವಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಇಂದಜಿತ್, 25 ಕೋಟಿ ವಂಚನೆ ಯತ್ನದಲ್ಲಿ ಮಹಿಳೆ ಅರುಣಾ ಕುಮಾರಿಯನ್ನು ಬಳಸಿಕೊಂಡು ಆಕೆಗೆ ಅನ್ಯಾಯ ಮಾಡಿದ್ದಾರೆ. ನಟ ದರ್ಶನ ಹಾಗೂ ನಿರ್ಮಾಪಕರ ನಡುವೆ ಹಲವು ವ್ಯವಹಾರಗಳು ನಡೆದಿವೆ. ಈ ಬಗ್ಗೆ ನನ್ನ ಬಳಿ ಸಾಕಷ್ಟು ಸಾಕ್ಷ್ಯಗಳಿವೆ. ಮಹಿಳೆಯನ್ನು ಬಳಸಿಕೊಂಡು ಆಕೆಯನ್ನು ಆರೋಪಿ ಸ್ಥಾನದಲ್ಲಿಡಲಾಗಿದೆ. ಈಗ ಆಕೆಗೆ ಬೆದರಿಕೆ ಹಾಕಲಾಗುತ್ತಿದೆ. ಮಹಿಳೆಯನ್ನು ಕಾರಿನಲ್ಲಿ ಆರ್,ಆರ್ ನಗರ ಮನೆ ಬಳಿ ಕರೆಸಿಕೊಂಡು ದರ್ಶನ್ ಹಾಗೂ ಸ್ನೇಹಿತರು ಆಕೆಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.

ಇನ್ನು ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ದರ್ಶನ್ ಹಾಗೂ ಗ್ಯಾಂಗ್ ಹೋಟೆಲ್ ನ ದಲಿತ ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಂದು ಹೋಟೆಲ್ ನಲ್ಲಿ ದರ್ಶನ್, ರಾಕೇಶ್, ಹರ್ಷ, ಪವಿತ್ರಾ ಗೌಡ ಹಾಗೂ ಮತ್ತಿಬ್ಬರು ಯುವತಿಯರು ಇದ್ದರು. ಸಪ್ಲೈಯರ್ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಸಾಕ್ಷ್ಯ ನನ್ನ ಬಳಿ ಇದೆ. ಹಲ್ಲೆಗೊಳಗಾದ ವ್ಯಕ್ತಿ ಕಣ್ಣಿಗೆ ಏಟಾಗಿದ್ದು, ದೃಷ್ಟಿ ಮಸುಕಾಗಿದೆ. ಈ ಎರಡೂ ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತದೆ ಎನ್ನುತ್ತಿದ್ದಂತೆಯೇ ಮೈಸೂರು ಪೊಲೀಸ್ ಠಾಣೆಯಲ್ಲಿ ಸೆಟಲ್ ಮೆಂಟ್ ಮಾಡಿಕೊಳ್ಳಲಾಗಿದೆ. ಹಲ್ಲೆ ನಡೆಸಿಲ್ಲ ಎನ್ನುವುದಾದರೆ ದರ್ಶನ್ ದೇವರ ಮೇಲೆ ಪ್ರಮಾಣ ಮಾಡಲಿ. ಓರ್ವ ಮಹಿಳೆ ಬಳಸಿಕೊಂಡು ಆಕೆಗೆ ಅನ್ಯಾಯ ಮಾಡಿ, ಸಾಮಾನ್ಯ ಸಪ್ಲೈಯರ್ ಮೇಲೂ ಹಲ್ಲೆ ನಡೆಸಿ ದೌರ್ಜನ್ಯಗಳನ್ನು ನಡೆಸುತ್ತಿದ್ದರೂ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಳ್ಳದೇ ಎಲ್ಲವನ್ನು ಠಾಣೆಯಲ್ಲೇ ಸೆಟಲ್ ಮೆಂಟ್ ಮಾಡಿ ಕಳುಹಿಸುತ್ತಿದೆ ಎಂದರೆ ಮೈಸೂರು ಪೊಲೀಸರು ಕೈಗೆ ಬಳೆ ತೊಟ್ಟುಕೊಂಡಿದ್ದಾರಾ? ಇಡೀ ಪ್ರಕರಣವನ್ನು ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮೂರು ದಿನಗಳ ಕಾಲ ಭಾರಿ ಮಳೆ; ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button