Kannada NewsKarnataka NewsLatest

*ಆಚಾರ್ಯ ವಿದ್ಯಾಸಾಗರ ಶ್ರೀ ಅಂತಿಮ ದರ್ಶನಕ್ಕೆ ತೆರಳುತ್ತಿದ್ದ ವೇಳೆ ದುರಂತ; ಅಪಘಾತದಲ್ಲಿ ಮೂವರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಸಲ್ಲೇಖನ ವೃತದ ಮೂಲಕ ದೇಹತ್ಯಾಗ ಮಾಡಿದ್ದ ಜೈನ ಗುರು ಆಚಾರ್ಯ ವಿದ್ಯಾಸಾಗರ ಮಹಾರಾಜರ ಅಂತಿಮ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಕಾರೊಂದು ಕಾಲುವೆಗೆ ಬಿದ್ದು ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಾರಾಷ್ಟ್ರದ ಗೊಂಡಿಯಾದ ಅಂಗಾಂವ್ ಹಾಗೂ ಸಲೇಕಾ ನಡುವಿನ ಕಾಲುವೆಗೆ ಕಾರು ಬಿದ್ದಿದೆ. ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಕಾರಿನಲ್ಲಿ 6 ಜನರು ಪ್ರಯಾಣಿಸುತ್ತಿದ್ದರು.

ಆಚಾರ್ಯಾ ವಿದ್ಯಾಸಾಗರ ಮಹಾರಾಜ್ ಅವರ ಅಂತಿಮ ದರ್ಶನಕ್ಕೆಂದು ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

Home add -Advt

Related Articles

Back to top button