Kannada NewsKarnataka NewsLatest
ಬೆಳಗಾವಿ ಹೊಟೆಲ್ ನಿಂದ ಹಿಂದೂ ಸಾಧು-ಸಂತರ ಅಪಮಾನ: ಕ್ಷಮೆ ಯಾಚನೆಗೆ 24 ಗಂಟೆ ಗಡುವು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಹೊಟೆಲ್ ಒಂದರ ಜಾಹಿರಾತಿನಲ್ಲಿ ಹಿಂದೂ ಸಾಧು ಸಂತರಿಗೆ ಅಪಮಾನ ಮಾಡಲಾಗಿದ್ದು 24 ಗಂಟೆಯಲ್ಲಿ ಕ್ಷಮೆ ಕೇಳದಿದ್ದಲ್ಲಿ ಮುಂದಾಗುವ ಅನಾಹುತಕ್ಕೆ ಹೊಟೆಲ್ ನವರೇ ಹೊಣೆ ಎಂದು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಎಚ್ಚರಿಸಿದೆ.

ಬಿರಿಯಾನಿಯ ಜಾಹೀರಾತನ್ನು ನಿಯಾಜ್ ಹೋಟೆಲ್ ನಿನ್ನೆ ಬಿಡುಗಡೆ ಮಾಡಿದ್ದು, ಅದರಲ್ಲಿ ಹಿಂದೂ ಸಾಧು-ಸಂತರ ಅಪಮಾನ ಮಾಡಲಾಗಿದೆ, ಹೊಟೆಲ್ ಮಾಲಿಕನ ವಿರುದ್ಧ ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಪೊಲೀಸ್ ಸ್ಟೇಷನ್ ನಲ್ಲಿ ದೂರು ನೀಡಲಾಗಿದೆ ಎಂದು ವಿಶ್ವಹಿಂದೂ ಪರಿಷತ್, ಬಜರಂಗ ದಳ ಪ್ರಕಟಣೆಯಲ್ಲಿ ತಿಳಿಸಿದೆ.

ಬಜರಂಗದಳದ ಬೆಳಗಾವಿ ವಿಭಾಗ ಸಂಯೋಜಕರ ಸದಾಶಿವ ಗುದಗಗೋಳ, ಬೆಳಗಾವಿ ಜಿಲ್ಲಾ ಸಂಯೋಜಕ, ಬಾವಕಣ್ಣ ಲೋಹಾರ, ಆಧಿನಾಥ ಗಾವಡೆ, ಜಿಲ್ಲಾ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ವಿಜಯ ಜಾಧವ ಮತ್ತು ಸುನಿಲ್ ಕನೇರಿ ಮುಂತಾದವರು ಇದ್ದರು.
ಖಂಡನೆ
ನಿಯಾಜ್ ಹೊಟೆಲ್ ತಮನ್ನ ಜಾಹಿರಾತಿನಲ್ಲಿ ಹಿಂದೂ ಸಾಧು ಸಂತರಿಗೆ ಅವಮಾನ ಮಾಡಿರುವುದನ್ನು ವಿಶ್ವಹಿಂದೂ ಪರಿಷತ್ ಉತ್ತರ ಕರ್ನಾಟಕ ಕೋಶಾಧ್ಯಕ್ಷ ಕೃಷ್ಣ ಭಟ್ ಮತ್ತು ಬಿಜೆಪಿ ಜಿಲ್ಲಾ ಗ್ರಾಮೀಣ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ತೀವ್ರವಾಗಿ ಖಂಡಿಸಿದ್ದಾರೆ.
ಕೂಡಲೇ ಕ್ಷಮೆ ಯಾಚಿಸಬೇಕು. ಮತ್ತು ಅವರ ಹೊಟೆಲ್ ಬಹಿಷ್ಕರಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಕನಿಷ್ಠ 5 ಮಠಾಧೀಶರ ಕಾಲಿಗೆ ಬಿದ್ದು ಕ್ಷಮೆ ಯಾಚಿಸಬೇಕು ಎಂದು ಕೃಷ್ಣ ಭಟ್ ಆಗ್ರಹಿಸಿದ್ದಾರೆ.