Belagavi NewsBelgaum NewsBusinessKarnataka NewsLatest

*ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಮತ್ತೊಂದು ನೂತನ ಶಾಖೆ ಉದ್ಘಾಟನೆ*

ಪ್ರಗತಿವಾಹಿನಿ ಸುದ್ದಿ: ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದಲ್ಲಿ ಜೊಲ್ಲೆ ಗ್ರೂಪ್ ನ ಅಂಗಸಂಸ್ಥೆಯಾದ ಶ್ರೀ ಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ.ಯಕ್ಸಂಬಾ (ಮಲ್ಟಿ ಸ್ಟೇಟ್)ಶಾಖೆ-ಕಂಪ್ಲಿ 212 ನೇ ಶಾಖೆಯ ಉದ್ಘಾಟನಾ ಸಮಾರಂಭವನ್ನು ಹಂಪಿ ಸಾವಿರದೇವರ ಮಠದ ಷ.ಬ್ರ.ಶ್ರೀ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ,ಕಂಪ್ಲಿ ಕಲ್ಮಠ ಮಠದ ಪ.ಪೂಜ್ಯ ಶ್ರೀ ಮ.ನಿ. ಪ್ರ.ಅಭಿನವ ಪ್ರಭು ಮಹಾಸ್ವಾಮಿಜಿಗಳ ದಿವ್ಯ ಸಾನಿಧ್ಯದಲ್ಲಿ ಶ್ರೀಗಳ ಅಮೃತ ಹಸ್ತದಿಂದ ದೀಪ ಪ್ರಜಲ್ವನೆ ಮೂಲಕ ಉದ್ಘಾಟಿಸಿದರು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಜಯಾನಂದ ಜಾಧವ, ನಿರ್ದೇಶಕರಾದ ಯಾಸಿನ ತಾಂಬೋಳಿ, ಬಿಪಿನ ಚಂದ್ರ ದೇಶಪಾಂಡೆ, ಕಂಪ್ಲಿ ಪುರಸಭೆ ಮಾಜಿ ಅಧ್ಯಕ್ಷರಾದ ಬಿ.ಸಿದ್ದಪ್ಪ, ಶಂಕರ ಸಿದ್ದವೀರ ಖಜ್ಜನವರ ಹಾಗೂ ಪುರಸಭೆ ಸದಸ್ಯರು, ಸಂಸ್ಥೆಯ ಪದಾಧಿಕಾರಿಗಳು, ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button