Belagavi NewsBelgaum NewsKannada NewsKarnataka News
*ಪತ್ರಕರ್ತ ಮಹಾದೇವ ಪವಾರ ಅವರ ಪುತ್ರ ನಿಧನ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇಲ್ಲಿನ ರಾಜಹಂಸಗಡದ ಯುವಕ ವಿಘ್ನೇಶ್ ಮಹಾದೇವ ಪವಾರ (21) ಚಿಕಿತ್ಸೆ ಫಲಿಸದೆ ಭಾನುವಾರ ನಿಧನರಾಗಿದ್ದಾರೆ.
ವಿಘ್ನೇಶ್ ಅವರು ಪತ್ರಕರ್ತ ಮಹಾದೇವ ಪವಾರ ಅವರ ಪುತ್ರನಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಮೃತ ವಿಘ್ನೇಶ್ ತಮ್ಮ ತಂದೆ, ತಾಯಿ ಹಾಗೂ ಓರ್ವ ಸಹೋದರಿ ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ಮೆಕ್ಯಾನಿಕಲ್ ಎಂಜಿನಿಯರಿಂಗ್ ನಲ್ಲಿ ಪ್ರಥಮ ರ್ಯಾಂಕ್ ಪಡೆದಿದ್ದ ವಿಘ್ನೇಶ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ.




