Kannada NewsKarnataka News
ಶಶಿಕಲಾ ಜೊಲ್ಲೆ ಪರ ಜ್ಯೋತಿಪ್ರಸಾದ ಜೊಲ್ಲೆ ಪ್ರಚಾರ
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಸ್ಥಳೀಯ ಮತಕ್ಷೇತ್ರದ ಮಾಣಕಾಪೂರ ಗ್ರಾಮದ ಕುಂಬಾರಗಲ್ಲಿಯಲ್ಲಿ ಮನೆ ಮನೆಗೆ ತೆರಳಿ ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ ತೆರಳಿ ಬಿಜೆಪಿ ಅಭ್ಯರ್ಥಿ ಶಶಿಕಲಾ ಜೊಲ್ಲೆಯವರಿಗೆ ಮತ ಹಾಕಲು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಣಕಾಪೂರ ಗ್ರಾಮದ ಗ್ರಾಮ ಪಂಚಾಯತ ಉಪಾಧ್ಯಕ್ಷ ಯುನೂಸ್ ಮುಲ್ಲಾ, ಶ್ರೀಕಾಂತ ಲೊಂಡೆ, ಬಾಜಿರವ ಕೋಳಿ, ದಾದಾಸೋ ಪೂಜಾರಿ, ಸುಕಮಾರ ಚೌಗಲೆ, ಮಂಗೇಶ ಅರಗೆ, ಕವಿತಾ ಲೊಂಡೆ, ಜಯಶ್ರೀ ಪೂಜಾರಿ, ಲತಾ ಕೇರುರೆ, ಸ್ಥಳೀಯ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.




