Latest

ಕೈಗಾ ಅಣು ವಿದ್ಯುತ್ ಸ್ಥಾವರದ ನಿರ್ದೇಶಕರಿಗೆ 3 ಲಕ್ಷ ರೂ. ವಂಚನೆ: ವಿಮಾನದ ಟಿಕೇಟ್ ರದ್ದುಪಡಿಸಲು ಹೋಗಿ ಆಯ್ತು ಯಡವಟ್ಟು

ಪ್ರಗತಿ ವಾಹಿನಿ ಸುದ್ದಿ, ಕಾರವಾರ – 

ಸೈಬರ್ ವಂಚಕರ ಜಾಲಕ್ಕೆ ಜನಸಾಮಾನ್ಯರಷ್ಟೇ ಅಲ್ಲ, ದೊಡ್ಡ ದೊಡ್ಡ ಮೇಧಾವಿಗಳೂ ಬಲಿಯಾಗುತ್ತಿದ್ದಾರೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.

ಕೈಗಾ ಅಣು ವಿದ್ಯುತ್ ಸ್ಥಾವರದ ನಿರ್ದೇಶಕರಾಗಿರುವ ರಾಜೇಂದ್ರಕುಮಾರ ಗುಪ್ತಾ ಸೈಬರ್ ವಂಚಕರಿಂದ ಬರೋಬ್ಬರಿ ಮೂರು ಲಕ್ಷ ರೂ. ಕಳೆದುಕೊಂಡಿದ್ದಾರೆ.

ವಂಚನೆಯಾಗಿದ್ದು ಹೇಗೆ ?

Home add -Advt

ರಾಜೇಂದ್ರಕುಮಾರ ಗುಪ್ತಾ ಅವರು ಕಳೆದ ಮೇ 29 ರಂದು ಗೋವಾದಿಂದ ಜೈಪುರಕ್ಕೆ ತೆರಳುವ ಸಲುವಾಗಿ ಇಂಡಿಗೋ ವಿಮಾನದಲ್ಲಿ ಸೀಟ್ ಬುಕ್ ಮಾಡಿದ್ದರು. ಆ ವಿಮಾನ ಸಂಚಾರ ರದ್ದಾಗಿದ್ದರೂ ವಿಮಾನ ಯಾನ ಸಂಸ್ಥೆಯವರು ಟಿಕೇಟ್ ಹಣವನ್ನು ಮರು ಪಾವತಿ ಮಾಡಿರಲಿಲ್ಲ.

ಗುಪ್ತಾ ಅವರು ಟಿಕೇಟ್ ಹಣವನ್ನು ಮರಳಿ ಪಡೆಯುವ ಸಲುವಾಗಿ ಗೂಗಲ್ ನಲ್ಲಿ ಇಂಡಿಗೋ ಸಂಸ್ಥೆಯ ಹೆಲ್ಪ್ ಲೈನ್ ನಂಬರ್ ಹುಡುಕುತ್ತಿದ್ದರು. ಈ ವೇಳೆ ಅವರಿಗೆ ಸಹಾಯವಾಣಿಯ ಹೆಸರಿನಲ್ಲಿ ಎರಡು ದೂರವಾಣಿ ಸಂಖ್ಯೆಗಳು ದೊರೆತಿವೆ. ದೂರವಾಣಿ ಸಂಖ್ಯೆಗೆ ಫೋನ್ ಮಾಡಿದಾಗ ವಂಚಕರು ಗುಪ್ತಾ ಬಳಿ ಎನಿ ಡೆಸ್ಕ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಲು ಹೇಳಿದ್ದಾರೆ. ಅವರ ಸೂಚನೆಯಂತೆ ಎನಿ ಡೆಸ್ಕ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡ ಬಳಿಕ ಗುಪ್ತಾ ಅವರ ಬ್ಯಾಂಕ್ ಖಾತೆಯಿಂದ ಮೂರು ಹಂತದಲ್ಲಿ ಒಟ್ಟು 3,00,068 ರೂ. ಹಣ ಲಪಟಾಯಿಸಿದ್ದಾರೆ.

ಗುಪ್ತಾ ಅವರು ಈ ಬಗ್ಗೆ ಕಾರವಾರ ಸಿಇಎನ್ ಅಪರಾಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅಥಣಿ ತಹಶೀಲ್ದಾರ್ ಅಮಾನತು

Related Articles

Back to top button