ಸಿಎಂ ಭೇಟಿಯಾದ ಕೇರಳ ಸಿಎಂ ಪಿಣರಾಯಿ ವಿಜಯನ್; ಅವರ ಯೋಜನೆಗಳ ಪ್ರಸ್ತಾಪ ತಿರಸ್ಕರಿಸಿದ್ದೇವೆ ಎಂದ ಸಿಎಂ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಇಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಭೇಟಿಯಾಗಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದು, ಆದರೆ ಅವರ ಪ್ರಸ್ತಾಪವನ್ನು ರಿಜಕ್ಟ್ ಮಾಡಲಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಕೇರಳ ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇರಳ ಸಿಎಂ ಪಿಣರಾಯಿ ವಿಜಯನ್ ಎರಡುಮೂರು ವಿಚಾರಗಳನ್ನು ಚರ್ಚೆ ಮಾಡಿದ್ದರು. ಕನ್ಯೂರು ರೈಲ್ವೆ ಲೈನ್ ವಿಚಾರವಾಗಿಯೂ ಚರ್ಚಿಸಿದರು. ಇದು 45 ಕಿ.ಮೀ.ನಷ್ಟು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಭಾಗದಲ್ಲಿ ಬರುತ್ತದೆ. ಆದರೆ ಇದು ಎಕೋಸೆನ್ಸಿಟಿವ್ ಜೋನ್ ಎಂದು ಕೇಂದ್ರ ರಿಜೆಕ್ಟ್ ಮಾಡಿದೆ. ಮೈಸೂರು ಲೈನ್ ಬಗ್ಗೆಯೂ ಪ್ರಸ್ತಾಪ ಮಾಡಿದರು. ಇದು ಬಂಡಿಪುರ ಎಕೋಸೆನ್ಸಿಟಿವ್ ಝೋನ್ ಎಂದು ಪರಿಗಣಿಸಲ್ಪಡುತ್ತದೆ. ಹಾಗಾಗಿ ಎರಡೂ ಯೋಜನೆಗಳನ್ನು ರಿಜೆಕ್ಟ್ ಮಾಡಿದ್ದೇವೆ ಎಂದರು.
ಎರಡೂ ರಾಜ್ಯಗಳು ಸೇರಿ ಟನಲ್ ಲೈನ್ ಮಾಡೋಣ ಎಂದು ಪ್ರಸ್ತಾಪಿಸಿದರು. ಆದರೆ ಅರಣ್ಯ ಸಂಪತ್ತು ನಾಶವಾಗುತ್ತೆ ಎಂಬ ಕಾರಣಕ್ಕೆ ಅದೂ ಕೂಡ ರಿಜೆಕ್ಟ್ ಮಾಡಿದ್ದೇವೆ. ಬಳಿಕ ರಾತ್ರಿ ವೇಳೆ ಇಗಿರುವ ಎರಡು 2 ಬಸ್ ಬದಲು 4 ಬಸ್ ಓಡಾಟಕ್ಕೆ ಪ್ರಸ್ತಾಪಿಸಿದರು. ಆ ಪ್ರಸ್ತಾವನೆಯನ್ನೂ ನಾವು ತಿರಸ್ಕರಿಸಿದ್ದೇವೆ ಎಂದು ತಿಳಿಸಿದರು.
ವಿದ್ಯಾರ್ಥಿನಿಯರ ಖಾಸಗಿ ವಿಡಿಯೋ ವೈರಲ್; ವಿಶ್ವವಿದ್ಯಾಲಯದಲ್ಲಿ ತೀವ್ರಗೊಂಡ ಪ್ರತಿಭಟನೆ; ಓರ್ವ ಅರೆಸ್ಟ್
https://pragati.taskdun.com/latest/girls-hostelprivate-videos-leakedchandigarh-universitystudents-protest/