Latest

ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಕಿಚ್ಚ ಅಭಿಮಾನಿಗಳ ಅಸಮಾಧಾನದ ಕಿಚ್ಚು: ಲಘು ಲಾಠಿಚಾರ್ಜ್

ಪ್ರಗತಿವಾಹಿನಿ ಸುದ್ದಿ, ದಾವಣಗೆರೆ: ಜಿಲ್ಲೆಯ ರಾಜನಹಳ್ಳಿಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಾತ್ರೆ ಸಂದರ್ಭದಲ್ಲಿ ನಟ ಕಿಚ್ಚ ಸುದೀಪ್ ಅಭಿಮಾನಿಗಳ ಆಕ್ರೋಶ ವ್ಯಕ್ತವಾಗಿದ್ದು ವಾಲ್ಮೀಕಿ ಪೀಠದ ಸ್ವಾಮೀಜಿ ಪ್ರಸನ್ನಾನಂದಪುರಿ ಅವರು ತಮ್ಮ ಭಾಷಣವನ್ನೇ ಮೊಟಕುಗೊಳಿಸಬೇಕಾಯಿತು.

ಇಷ್ಟಕ್ಕೂ ಸಾಲದ ಕಿಚ್ಚ ಸುದೀಪ್ ಅಭಿಮಾನಿಗಳು ವೇದಿಕೆಯತ್ತ ನುಗ್ಗಿದ್ದಲ್ಲದೆ ವೇದಿಕೆಯೆದುರಿನ ಕುರ್ಚಿಗಳನ್ನು ಎತ್ತಿ ಬಿಸಾಡಿದ್ದಾರೆ. ಇವರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿಚಾರ್ಜ್ ನಡೆಸಿದ್ದಾರೆ.

ವೇದಿಕೆಯಲ್ಲಿ ಪ್ರಸನ್ನಾನಂದ ಪುರಿ ಶ್ರೀಗಳು ಮಾತನಾಡಲು ಮುಂದಾಗುತ್ತಿದ್ದಂತೆ ಕಿಚ್ಚ ಅಭಿಮಾನಿಗಳು ಚಪ್ಪಾಳೆ ತಟ್ಟಿ, ಸಿಳ್ಳೆ, ಕೇಕೆ ಹಾಕಿ  “ಕಿಚ್ಚ.. ಕಿಚ್ಚ..” ಎಂದು ಕಿರುಚಾಡಲು ಆರಂಭಿಸಿದರು. ಇದು ವಿಪರೀತಕ್ಕೇರಿ ವೇದಿಕೆಯತ್ತ ನುಗ್ಗತೊಡಗಿದರು. ಶಾಂತಗೊಳ್ಳುವಂತೆ ವೇದಿಕೆಯಿಂದ ಮಾಡಿದ ನಿವೇದನೆಗೂ ಅಭಿಮಾನಿಗಳು ಬಗ್ಗಲಿಲ್ಲ. ಇವರನ್ನು ನಿಯಂತ್ರಿಸುವಲ್ಲಿ, ಸಂಘಟಕರು, ಪೊಲೀಸರು ಹೈರಾಣಾದರು. ಕೊನೆಗೆ ವೇದಿಕೆ ಎದುರು ಇದ್ದ ಪ್ರೇಕ್ಷಕರ ಕುರ್ಚಿಗಳನ್ನೇ ಎತ್ತಿ ಬಿಸಾಡಿ ಚೆಲ್ಲಾಪಿಲ್ಲಿ ಮಾಡುತ್ತಿದ್ದಂತೆ ಕೋಪೋದ್ರಿಕ್ತರಾದ ಪ್ರಸನ್ನಾನಂದಪುರಿ ಶ್ರೀಗಳು ತಮ್ಮ ಮಾತನ್ನೇ ನಿಲ್ಲಿಸಿದರು.

ಪರಿಸ್ಥಿತಿ ಕೈಮೀರುವ ಹಂತದಲ್ಲಿ ಪೊಲೀಸರು ಲಘು ಲಾಠಿಚಾರ್ಜ್ ಮಾಡಿ ಕಿಚ್ಚ ಅಭಿಮಾನಿಗಳ ಕಿಚ್ಚು ತಣಿಸಬೇಕಾಯಿತು.

Home add -Advt

ಏತನ್ಮಧ್ಯೆ ಟ್ವೀಟ್ ಮಾಡಿರುವ ಕಿಚ್ಚ ಸುದೀಪ್ ಈ ಗಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ತಮಗೆ ಈ ಕಾರ್ಯಕ್ರಮಕ್ಕೆ ಆಹ್ವಾನವೇ ಇರಲಿಲ್ಲ, ಮಾಹಿತಿಯೂ ಇರಲಿಲ್ಲ. ತಾವು ಯಾವತ್ತೂ ಒಪ್ಪಿಕೊಂಡ ಕಾರ್ಯಕ್ರಮ ತಪ್ಪಿಸಿಲ್ಲ ಎಂದು ಹೇಳಿಕೊಂಡಿದ್ದಾರೆ.

*ಸಚಿವ ನಿರಾಣಿ ಒಡೆತನದ ಕಾರ್ಖಾನೆ ಬಾಯ್ಲರ್ ದುರಂತ; ಓರ್ವ ಸಾವು; ನಾಲ್ವರ ಸ್ಥಿತಿ ಗಂಭೀರ*

https://pragati.taskdun.com/suger-factoryboiler-blastone-death4-injuerdbagalakote/

ಇಸ್ರೋದಿಂದ 3 ಉಪಗ್ರಹಗಳನ್ನು ಹೊತ್ತ ಹೊಸ ರಾಕೆಟ್ SSLV-D2 ಉಡಾವಣೆ

https://pragati.taskdun.com/isro-launches-new-rocket-sslv-d2-from-sriharikota/

*ಇಂದಿನಿಂದ ರಾಜ್ಯ ಬಜೆಟ್ ಅಧಿವೇಶನ; ವಿಧಾನಸೌಧದ ಸುತ್ತ ನಿಷೇಧಾಜ್ಞೆ ಜಾರಿ*

https://pragati.taskdun.com/karnataka-budget-sessionvidhanasoudha144-section/

Related Articles

Back to top button