Latest

ವಿಧಾನಸಭೆ ಅಧಿವೇಶನ ಹಠಾತ್ ಮುಂದೂಡಿಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಪ್ರಕರಣ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ ಹೇಳಿಕೆ ಹಿನ್ನೆಲೆಯಲ್ಲಿ ತೀವ್ರ ಗದ್ದಲ, ಗಲಾಟೆ ಮುಂದುವರಿದಿದ್ದರಿಂದ ವಿಧಾನ ಮಂಡಳದ ಅಧಿವೇಶನವನ್ನು ಹಠಾತ್ ಆಗಿ ಅನಿರ್ಧಿಷ್ಟಾವದಿಗೆ ಮುಂದೂಡಲಾಗಿದೆ.

ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿವೇಶನವನ್ನು ಮುಂದೂಡಿದ್ದಾರೆ. ಕಳೆದ 3 ದಿನದಿಂದ ರಮೇಶ ಜಾರಕಿಹೊಳಿ ಸಿಡಿ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಧೀಶರ ಮಾರ್ಗದರ್ಶನದಲ್ಲಿ ತನಿಖೆ ನಡೆಸಬೇಕು, 6 ಸಚಿವರು ರಾಜಿನಾಮೆ ನೀಡಬೇಕು ಎಂದು ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಇದರಿಂದಾಗಿ ಸುಗಮ ಕಲಾಪ ನಡೆದಿರಲಿಲ್ಲ.

Home add -Advt

ಇಂದು ಸಚಿವ ಸುಧಾಕರ ಏಕ ಪತ್ನಿ ವ್ರತ ಕುರಿತು ಎಲ್ಲ 224 ಶಾಸಕರ ತನಿಖೆ ನಡೆಯಲಿ ಎಂದಿದ್ದು ಮತ್ತಷ್ಟ ಪ್ರತಿಭಟನೆ ಕಾರಣವಾಗಿತ್ತು. ಹಲವಾರು ಬಾರಿ ಮನವಿ ಮಾಡಿದರೂ ವಿರೋಧ ಪಕ್ಷಗಳು ಪ್ರತಿಭಟನೆ ಮುಂದುವರಿಸಿದ್ದರಿಂದ ಸಭಾಧ್ಯಕ್ಷರು ಅಧಿವೇಶನವನ್ನು ಹಠಾತ್ ಮುಂದೂಡಿದರು.

ಈ ಮೊದಲಿನ ನಿರ್ಣಯದಂತೆ ಅಧಿವೇಶನ  ಮಾ.30ರ ವರೆಗೆ ನಡೆಯಬೇಕಿತ್ತು.

ಒಂದೇ ಹೆಂಡ್ತಿ ಚಾಲೇಂಜ್ ; ಶಾಸಕರ ಸಹಿ ಸಂಗ್ರಹಕ್ಕೆ ಮುಂದಾದ ಕಾಂಗ್ರೆಸ್

224 ಶಾಸಕರ ಏಕಪತ್ನಿ ವ್ರತ ತನಿಖೆಯಾಗಲಿ: ಸುಧಾಕರ ಓಪನ್ ಚಾಲೇಂಜ್

 

ಬೆಂಕಿ ಹೊತ್ತಿಸಿದ ಸುಧಾಕರ್ ಏಕಪತ್ನಿ ವ್ರತ ಹೇಳಿಕೆ

Related Articles

Back to top button