Karnataka News

*ಹೆಬ್ಬಾವಿಗೆ ಹೊಡೆದ ಗುಂಡು ರಿವರ್ಸ್ ಆಗಿ ಯುವಕ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಹೆಬ್ಬಾವಿಗೆ ಹೊಡೆದ ಗುಂಡೇಟು ರಿವರ್ಸ್ ತಗುಲಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕತಗಾನ ಗ್ರಾಮದಲ್ಲಿ ನಡೆದಿದೆ.

ಪ್ರಥಮ ಸುಬ್ಬು ನಾಯ್ಕ್ (28) ಮೃತ ಯುವಕ. ಕೋಳಿ ಫಾರಂ ಗೆ ನುಗ್ಗಿದ ಹೆಬ್ಬಾವಿಗೆ ಯುವಕ ನಾಡಬಂದೂಕಿನಿಂದ ಗುಂಡು ಹೊಡೆದಿದ್ದಾನೆ. ಆದರೆ ಗುಂಡು ಮರಳಿ ಬಂದು ಯುವಕನಿಗೆ ತಗುಲಿದ್ದು, ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button