Kannada NewsKarnataka NewsLatest

​ ಕುರಿಗಾಹಿಗಳ ಕುಟುಂಬಕ್ಕೆ ನೆರವು: ಕಂಬನಿ ಒರೆಸಿದ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ​ಬೆಳಗಾವಿ -​ ವಿಷಪೂರಿತ ಆಹಾರ ಸೇವಿಸಿ ಕುರಿಗಳು ಸಾವಿಗೀಡಾದ ಘಟನೆಗೆ ತಕ್ಷಣ ಸ್ಪಂದಿಸಿದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಲಕ್ಷ್ಮಿ ತಾಯಿ ಫೌಂಡೇಶನ್ ವತಿಯಿಂದ ಆರ್ಥಿಕ ನೆರವು ನೀಡಿದರು.
ಸುಳಗಾ ಗ್ರಾಮದ ಪರಶುರಾಮ ಭೀಮಾ ಉಚಗಾಂವಕರ್ ಹಾಗೂ ಯಲ್ಲಪ್ಪ ರಾಮಾ ನರೋಟಿ ಕುಟುಂಬಗಳಿಗೆ ಸಂಬಂಧಪಟ್ಟ ಸುಮಾರು ಹದಿನೈದು ಕುರಿಗಳು ಆಕಸ್ಮಿಕವಾಗಿ ವಿಷಪೂರಿತ ಸಸ್ಯಗಳನ್ನು ತಿಂದು ಸಾವನ್ನಪ್ಪಿದ್ದ​ವು.
ಸುದ್ದಿ ತಿಳಿದ ತಕ್ಷಣ ಅವರ ಮನೆಗಳಿಗೆ ತೆರಳಿ​ದ ಲಕ್ಷ್ಮಿ ಹೆಬ್ಬಾಳಕರ್,​ ಕುಟುಂಬಗಳಿಗೆ ಸಾಂತ್ವನವನ್ನು ಹೇಳಿ ​ ಲಕ್ಷ್ಮೀ ತಾಯಿ​ ಫೌಂಡೇಷನ್ ವತಿಯಿಂದ ಧನ ಸಹಾಯ ಮಾಡಿ ಧೈರ್ಯವನ್ನು ತುಂಬಿ​ದರು.
​ 
ಕುರಿಗಳನ್ನು ನಂಬಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ​ಇಂತ​ವರಿಗೆ ಕುರಿಗಳೇ ಜೀವನದ ಆಧಾರ ಸ್ತಂಭಗಳಾಗಿವೆ. ಕುರಿಗಳ ಸಾವಿನ ಹಿ​ನ್ನೆಲೆಯಲ್ಲಿ ಈ ಕುಟುಂಬಗಳು ಪರಿತಪಿಸುತ್ತಿದ್ದು, ಮುಖ್ಯಮಂತ್ರಿ​ ಪರಿಹಾರ ನಿಧಿಯಿಂದ​ ಹೆಚ್ಚಿನ​ ಪರಿಹಾರ ಕೊಡಿ​ಸಲು ಪ್ರಯತ್ನಿಸುತ್ತೇನೆ ಎಂದು ಹೆಬ್ಬಾಳಕರ್ ಭರವಸೆ ನೀಡಿದರು. 
ಈ ಸಂದರ್ಭದಲ್ಲಿ ಹಿರಿಯರಾದ ಬಾಗಣ್ಣ ನರೋಟಿ​, ಯುವರಾಜ ಕದಂ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button