Kannada NewsLatestPolitics

ಕೆಎಲ್‌ಇ ನರ್ಸಿಂಗ್ ಕಾಲೇಜ್: ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆಎಲ್‌ಇ ನರ್ಸಿಂಗ್ ಕಾಲೇಜಿನ 35ನೇ ಡಿಪ್ಲೋಮಾ ಮತ್ತು 33ನೇ ಬಿಎಸ್ಸಿ ನರ್ಸಿಂಗ್ ಬ್ಯಾಚ್ ನ ಜ್ಯೋತಿ ಬೆಳಗುವಿಕೆ ಮತ್ತು ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭವನ್ನು ಬೆಳಗಾವಿಯಲ್ಲಿಂದು ಆಚರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಲ್ ಪದ್ಮಿನಿ ಶ್ರೀನಿವಾಸ, ಕಮಾಂಡಿಂಗ್ ಅಧಿಕಾರಿ ಮೀಲಿಟರಿ ಆಸ್ಪತ್ರೆ ಬೆಳಗಾವಿ ಅವರು ನರ್ಸಿಂಗ್ ವೃತ್ತಿಯು ಸೇವೆಯನ್ನು ನೀಡುತ್ತದೆ. ಮುಖ್ಯವಾಗಿ ರೋಗಿಗಳ ಆರೈಕೆಯಲ್ಲಿಯೇ ಸಂತೃಪ್ತಿಯನ್ನು ಕಾಣುವದಾಗಿದೆ. ವೈದ್ಯರಿಗಿಂತ ನರ್ಸಿಂಗ ಸೇವೆಯು ರೋಗಿಗಳಿಗೆ ಬಹಳ ಹತ್ತಿರವಾಗಿರುತ್ತದೆ. ಸದಾ ರೋಗಿಯ ಆರೈಕೆ ಮಾಡುತ್ತ ಅವರೊಂದಿಗೆ ಕಾಳಜಿಪೂರ್ವಕವಾಗಿ ನಡೆದುಕೊಳ್ಳಬೇಕಾಗುತ್ತದೆ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

Home add -Advt

ಕಾರ್ಯಕ್ರಮದ ಗೌರವಾನ್ವಿತ ಅತಿಥಿಗಳಾದ ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚರ‍್ಯರಾದ ಡಾ. ಎನ್. ಎಸ್. ಮಹಾಂತಶೆಟ್ಟಿ, ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಎಮ್. ವಿ. ಜಾಲಿ, ಯುಎಸ್‌ಎಂ ಕೆಎಲ್‌ಇ ನಿರ್ದೇಶಕರಾದ ಡಾ. ಎಚ್.ಬಿ. ರಾಜಶೇಖರ ಅವರು ಹೊಸದಾಗಿ ಸೇರಿಕೊಂಡ ನರ್ಸಿಂಗ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕೆ.ಎಲ್.ಇ. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ವಿವೇಕ ಸಾವೋಜಿ ಅವರು ವಹಿಸಿ ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ 100 ಬಿ.ಎಸ್ಸಿ. ನರ್ಸಿಂಗ್ ವಿದ್ಯಾರ್ಥಿಗಳು ಮತ್ತು 97 ಡಿಪ್ಲೊಮಾ ನರ್ಸಿಂಗ್ ವಿದ್ಯಾರ್ಥಿಗಳು ಪ್ರಮಾಣ ವಚನವನ್ನು ಸ್ವೀಕರಿಸಿದರು. ಕೆಎಲ್‌ಇ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಡಾ. ಸುಧಾ ಅ. ರಡ್ಡಿ ಅವರು ಸ್ವಾಗತಿಸಿದರು. ಉಪಪ್ರಾಂಶುಪಾಲರಾದ ಡಾ. ಸಂಗೀತಾ ಖರಡೆ ಅವರು ವಂದಿಸಿದರು.

ಬಜೆಟ್ ಘೋಷಣೆಗಳಿಗೆ ಏಪ್ರಿಲ್ 30ರೊಳಗೆ ಕಾರ್ಯಾದೇಶ ನೀಡಲು ಸೂಚನೆ

Related Articles

Back to top button