Belagavi NewsBelgaum NewsHealthKannada NewsKarnataka News

*ಭ್ರೂಣ ಲಿಂಗ ಪತ್ತೆ ನಿಷೇಧ ಶಾಸನ: ಜಿಲ್ಲಾ ಸಲಹಾ ಸಮಿತಿ ಸಭೆ ನಡೆಸಿದ ಡಿಎಚ್‌ಓ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಶಾಸನ 1994 (ಪಿ.ಸಿ.ಪಿ.ಎನ್.ಡಿ.ಟಿ 1994 ಕಾಯ್ದೆ) ನೂತನ ಜಿಲ್ಲಾ ಸಲಹಾ ಸಮಿತಿ ಸಭೆ ಇಂದು ಜರುಗಿತು.

ಸಕಾರದ ಉಪ ಕಾರ್ಯದರ್ಶಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಸೂಚನೆ ಪ್ರಕಾರ ಮುಂದಿನ 3 ವರ್ಷಗಳ ಅವಧಿಗೆ ಬೆಳಗಾವಿ ಜಿಲ್ಲಾ ಮಟ್ಟದ ನೂತನ ಸಲಹಾ ಸಮಿತಿಯ ಸಭೆಯನ್ನು ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಜರುಗಿತು.

Home add -Advt

ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳು ಹಾಗೂ ಪಿ.ಸಿ.ಪಿ.ಎನ್.ಡಿ.ಟಿ ನೊಡಲ್ ಅಧಿಕಾರಿಗಳಾದ ಡಾ.ವಿಶ್ವನಾಥ ಎಮ್ ಭೋವಿರವರು ನೂತನ ಸಭೆಯ ಅಧ್ಯಕ್ಷರನ್ನು ಮತ್ತು ಎಲ್ಲ ಸರ್ವ ಸದಸ್ಯರನ್ನು ಸ್ವಾಗತಿಸಿದರು.

ಪಿ.ಸಿ.ಪಿ.ಎನ್.ಡಿ.ಟಿ 1994 ರ ಕುರಿತು ಸರ್ವ ಸದಸ್ಯರ ಜವಾಬ್ದಾರಿಗಳು ಮತ್ತು ತಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಅದೇ ರೀತಿ ಎಲ್ಲ ಸದಸ್ಯರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ನೂತನ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಡಾ.ಮಂಜುನಾಥ ಹುಕ್ಕೇರಿ ಹಾಗೂ ಸದಸ್ಯರಾಗಿ ಡಾ.ರಮೇಶ ಚಂ ಪಟ್ಟಣಶೆಟ್ಟಿ, ಡಾ.ಸ್ವಪ್ಟಿಲ್ ಪಟ್ಟಣಶೆಟ್ಟಿ, ಕುಮಾರ ಜ್ಯೋತೇಪ್ಪಾ ಸರವದೆ, ಸಂಜಯ ಪಂಚಾಕ್ಷರಿ ಹೊಸಮಠ, ಸವಿತಾ ಸುಬಾಷ ಹೆಬ್ಬಾರ ಮತ್ತು ಮಹಾದೇವ ಕೇ ರಾಠೋಡ ರವರು ಸಭೆಯಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು. 

Related Articles

Back to top button