
ಪ್ರಗತಿವಾಹಿನಿ ಸುದ್ದಿ: ಬಾವಿ ನಿರ್ಮಾಣದ ವೇಲೆ ಮಣ್ಣು ಕುಸಿದು ಬಿದ್ದ ಪರಿಣಾಮ ಐವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಪನ್ನಾದ ಅಜಯ್ಗಢ್ ತೆಹಸಿಲ್ನ ಬಿಹಾರಪೂರ್ವ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಬಿನ್ನು ಅಹಿರ್ವಾರ್ ಅವರ ಹೊಲದಲ್ಲಿ ಬಾವಿ ನಿರ್ಮಾಣ ಕೆಲಸ ಮಾಡಲಾಗುತ್ತಿತ್ತು.ಕಳೆದ ಹತ್ತು ದಿನಗಳಿಂದ ಕೆಲಸ ನಡೆಯುತ್ತಿತ್ತು. ಇಂದು ಏಕಾಏಕಿ ಮಣ್ಣು ಕುಸಿದಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿ ಐವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಚುನ್ನು ಯಾದವ್, ರಾಜ್ಕುಮಾರ್ ಯಾದವ್, ಆಶಿಶ್ ಯಾದವ್ ಮತ್ತು ಚುನ್ವಾಡ್ ಪಾಲ್ ಸೇರಿದಂತೆ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ. ಘಟನೆ ಬೆನ್ನಲ್ಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಕಂದಾಯ ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಇಬ್ಬರ ಶವ ಪತ್ತೆಯಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.




