“ರಾವಣ ರಾಮನ ಬಿಲ್ಲು ಬಾಣ ವಶಪಡಿಸಿಕೊಂಡ” ಎಂದ ಉದ್ಧವ ಠಾಕ್ರೆ

ಪ್ರಗತಿವಾಹಿನಿ ಸುದ್ದಿ, ಮುಂಬೈ: ಶಿವಸೇನಾ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಚುನಾವಣಾ ಆಯೋಗ ಮುಟ್ಟುಗೋಲು ಹಾಕಿದ ನಂತರ “ರಾವಣ ರಾಮನ ಬಿಲ್ಲನ್ನು ವಶಪಡಿಸಿಕೊಂಡ” ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ ಠಾಕ್ರೆ ಉದ್ಗರಿಸಿದ್ದಾರೆ.

40 ತಲೆಯ ರಾವಣನು ಭಗವಾನ್ ರಾಮನ ಬಿಲ್ಲು ಮತ್ತು ಬಾಣವನ್ನು ಸೀಜ್ ಮಾಡಿದ್ದಾನೆ ಎಂದು ಹೇಳಿದ ಅವರು, “ನನಗೆ ನ್ಯಾಯಾಂಗದಲ್ಲಿ ನಂಬಿಕೆ ಇದೆ. ನಮಗೆ ನ್ಯಾಯ ಸಿಗುತ್ತದೆ. ನೀವು ನಿಮ್ಮ ತಾಯಿಯ ಎದೆಗೆ ಇರಿದಿದ್ದೀರಿ. ಬಾಳಾಸಾಹೇಬ್ ಅವರ ಹೆಸರನ್ನು ಬಳಸಬೇಡಿ” ಎಂದು ಹೇಳಿದರು.

ಮಾಜಿ ಶಾಸಕ ಸಹಿತ ಮೂವರಿಗೆ ಕಚ್ಚಿದ ಬೀದಿನಾಯಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button