
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ 8 ಜನರನ್ನು ಬಂಧಿಸಿ, 25,93,500/- ರೂ ಮೌಲ್ಯದ ಡಿಎಪಿ ರಸಗೊಬ್ಬರ ಚೀಲಗಳನ್ನು ಹಾಗೂ 2 ಟ್ರಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ದಿನಾಂಕ 23-05-2022 ರಂದು ಬೆಳಗಾವಿ ಗ್ರಾಮೀಣ ಪೊಲೀಸ ಠಾಣಿಯ ವ್ಯಾಪ್ತಿಯ ದೇಸೂರ ರೈಲ್ವೆ ಸ್ಟೇಷನ್ ಹತ್ತಿರ ಗೂಡ್ಡ ಶೇಡ್ ಗೊಡಾವನದಲ್ಲಿಟ್ಟ 900 ಆರ್ಸಿಎಫ್ ಕಂಪನಿಯ ಡಿಎಪಿ ರಸಗೊಬ್ಬರದ ಚೀಲಗಳು ಕಳುವಾದ ಬಗ್ಗೆ ಶಿವಾಜಿ ಬಾಳಾರಾಮ ಆನಂದಾಚೆ ಸಾ: ಹೊನಗಾ ಇವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಶ್ರೀನಿವಾಸ ಹಾಂಡ, ಪಿಐ ಬೆಳಗಾವಿ ಗ್ರಾಮೀಣ ಪೊಲೀಸ ಠಾಣೆ ಇವರ ನೇತೃತ್ವದಲ್ಲಿ ಜಾಡು ಹಿಡಿದು, ಐದು ಜನರನ್ನು ಪತ್ತೆ ಮಾಡಿ ವಿಚಾರಣೆಗೊಳಪಡಿಸಲಾಯಿತು.
1) ನಾಗರಾಜ ಈರಣ್ಣಾ ಪಠಾತ ( 21) ಸಾ: ಹಲಗಿಮರಡಿ ತಾ :ಜಿ ಬೆಳಗಾವಿ
2) ಪಂಡಿತ ಕಲ್ಲಪ್ಪಾ ಸನದಿ (37) ಸಾ: ಲಕ್ಲಬೈಲ್ ತಾ: ಖಾನಾಪೂರ ಬಿ : ಬೆಳಗಾವಿ
3) ವಸೀಮ್ ಇಸ್ಮಾಯಿಲ್ ಮಕಾಂದರ (23) ಸಾ: ಹೊಸ ವಂಟಮೂರಿ ತಾ :ಜಿ ಬೆಳಗಾವಿ
4) ಮಂಜುನಾಥ ಸೋಮಪ್ಪಾ ಹಮ್ಮನ್ನವರ ( 30) ಸಾ: ಲಕ್ಕೆಬೈಲ ತಾ : ಖಾನಾಪೂರ ಜಿ : ಬೆಳಗಾವಿ
5) ಗಜಬರ ಗೌಸಮುದ್ದಿನ ಅಡ್ಡಿಮನಿ (39) ವರ್ಷ ಸಾ: ಹುದಲಿ ತಾ :ಜಿ ಬೆಳಗಾವಿ
ಇವರನ್ನು ಬಂಧಿಸಿ ಅವರಿಂದ 1) ಆರ್ಸಿಎಫ್ ಕಂಪನಿಯ ಡಿ.ಎ.ಪಿ ರಸಗೊಬ್ಬರದ 810 ಚೀಲಗಳು ಅ.ಕಿ. 10,93,500/- ರೂ
2) ಕಳ್ಳತನ ಮಾಡಲು ಉಪಯೋಗಿಸಿದ ಎರಡು ಟ್ರಕ್ ಗಳು 15,00,000 ರೂ ಮೌಲ್ಯ, ಹೀಗೆ ಒಟ್ಟು 25,93,500/- ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಅದೆ.
ವಾರದೊಳಗೆ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ತಂಡವನ್ನು ಪೊಲೀಸ್ ಆಯುಕ್ತರು ಹಾಗೂ ಉಪ ಆಯುಕ್ತರುಗಳು ಶ್ಲಾಘಿಸಿದ್ದಾರೆ.
ಬೆಳಗಾವಿ: ಪತ್ನಿಯ ಸೀಮಂತಕ್ಕೆಂದು ರಜೆಯ ಮೇಲೆ ಹೊರಟಿದ್ದ ಯೋಧ ಅಪಘಾತಕ್ಕೆ ಬಲಿ