
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ಮಹಾಮಾರಿಯ ವಿರುದ್ಧ ನಿರಂತರ ಕಾರ್ಯಾಚರಣೆ ನಡೆಸುತ್ತಿರುವ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೆಸರಿನ ಲಕ್ಷ್ಮಿ ತಾಯಿ ಫೌಂಡೇಶನ್, ಮಂಗಳವಾರ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿ, ಮಾರಿಹಾಳ ಹಾಗೂ ಮೊದಗಾ ಗ್ರಾಮಗಳಲ್ಲಿ ವಿವಿಧ ಸಾಮಗ್ರಿಗಳನ್ನು ವಿತರಿಸಿತು.


ಎಷ್ಟೇ ಕಷ್ಟವೆನಿಸಿದರೂ ಜನರು ಮನೆಯಿಂದ ಹೊರಗೆ ಬರದೆ ಕೊರೋನಾ ರೋಗ ಹರಡದಂತೆ ಕಾಳಜಿವಹಿಸಬೇಕು. ಎಲ್ಲಕ್ಕಿಂತ ಜೀವ ಮುಖ್ಯ. ಹಾಗಾಗಿ ನಿಮ್ಮ ಹಾಗೂ ನಿಮ್ಮ ಕುಟುಂಬದ ರಕ್ಷಣೆಗಾಗಿ ಜನರು ಮನೆಯಲ್ಲೇ ಇರಬೇಕು ಎಂದು ಚನ್ನರಾಜ ಹಟ್ಟಿಹೊಳಿ ಜನರಲ್ಲಿ ವಿನಂತಿಸಿದರು.