Latest

ಇನ್ನೂ 23 ಜನರ ಸಿಡಿ ಇದೆ, ಸಧ್ಯದಲ್ಲೇ ಬಿಡುಗಡೆ ಎಂಬ ಸುದ್ದಿಯಿದೆ ಎಂದ ಯತ್ನಾಳ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇನ್ನೂ 23 ಜನಪ್ರತಿನಿಧಿಗಳ ಸಿಡಿ ಇದೆ. ಅದನ್ನೂ ಬಿಡುಗಡೆ ಮಾಡುತ್ತಾರೆ ಎಂಬ ಗಾಸಿಪ್ ಇದೆ. ಸಿಡಿ ಹೇಳಿಕೆಗಳನ್ನು ನೀಡಿ ಜನಪ್ರತಿನಿಧಿಗಳನ್ನು ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹೇಳಿಕೆಗೂ ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ನಾನು ಸಿಡಿ ಮಾಡಿದವನೂ ಅಲ್ಲ, ಆ ಸಿಡಿ ನಾನು ನೋಡಿಯೂ ಇಲ್ಲ ಎಂದರು.

Home add -Advt

ಈ ರೀತಿ ಬ್ಲಾಕ್ ಮೇಲ್ ತಂತ್ರ ಸರಿಯಲ್ಲ. ಇನ್ನೂ 23 ಜನರ ಸಿಡಿ ಇದೆ ಅದನ್ನು ವಾರದಲ್ಲಿ ಬಿಡುಗಡೆ ಮಾಡುತ್ತೇವೆ ಎಂಬ ಬೆದರಿಕೆಗಳನ್ನು ಕೂಡ ಹಾಕಲಾಗುತ್ತಿದೆ. ಎಲ್ಲಾ ಪಕ್ಷದಲ್ಲಿರುವ ಕೆಲ ನಾಯಕರು ಈ ರೀತಿ ಮಾಡಿಸುತ್ತಿದ್ದಾರೆ. ಕಾಂಗ್ರೆಸ್-ಬಿಜೆಪಿ ಎರಡೂ ಕಡೆಯ ಕೆಲ ನಾಯಕರು ಈ ರೀತಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ. ಮೊದಲು ಈ ಬಗ್ಗೆ ತನಿಖೆಯಾಗಬೇಕು ಎಂದು ಹೇಳಿದರು.

Related Articles

Back to top button