Kannada NewsKarnataka News

ಮಹಿಳೆಯೊಂದಿಗೆ ಅಸಭ್ಯ ವರ್ತನೆ: ಪಿಡಿಓ ಹಾಗೂ ಕರ ವಸೂಲಿಗಾರನಿಗೆ ಧರ್ಮದೇಟು

ಪ್ರಗತಿವಾಹಿನಿ ಸುದ್ದಿ: ಮಹಿಳಾ ಸಹೋದ್ಯೋಗಿಯೊಂದಿಗೆ ಅಸಭ್ಯ ವರ್ತನೆ ತೋರಿದ ಪಿಡಿಓ ಹಾಗೂ ಕರ ವಸೂಲಿಗಾರನಿಗೆ ಗ್ರಾಮಸ್ಥರು ಧರ್ಮದೇಟು ನೀಡಿರುವ ಘಟನೆ ನಡೆದಿದೆ.‌

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಹಾರಕೂಡ ಗ್ರಾಮ ಪಂಚಾಯತಿ ಪಿಡಿಓ ಯೋಗಿಶ್ ಹಿರೇಮಠ ಹಾಗೂ ಕರವಸೂಲಿಗಾರ ಮಿಥುನ್ ರಾಥೋಡ್‌ಗೆ ಧರ್ಮದೇಟು ನೀಡಲಾಗಿದೆ.‌

ಗ್ರಾಮ ಪಂಚಾಯತಿಯಲ್ಲೆ ಕೆಲಸ ಮಾಡುವ ಮಹಿಳಾ ಸಹದ್ಯೋಗಿಯೊಂದಿಗೆ ಅಸಭ್ಯ ವರ್ತನೆ ತೋರಿದ್ದಾರೆ ಎಂದು ಆರೋಪ ಇರುವ ಹಿನ್ನಲೆ ಪಿಡಿಓರನ್ನು ಗ್ರಾಮದ ಕೆಲ ಯುವಕರು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಯುವಕರು ಹಾಗೂ ಪಿಡಿಓ ಕೈ-ಕೈ ಮಿಲಾಯಿಸಿದ್ದಾರೆ.‌ ಘಟನಾ ಸ್ಥಳಕ್ಕೆ ಆಗಮಿಸಿದ ಮುಡಬಿ ಠಾಣಾ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ದಾರೆ. 

ಘಟನೆ ನಡೆದ ಕೆಲ ಸಮಯದ ಬಳಿಕ ಗ್ರಾಮಕ್ಕೆ ಭೇಟಿ ನೀಡಿ ಘಟನೆ ಕುರಿತು ತಾಲೂಕು ಪಂಚಾಯತ ಅಧಿಕಾರಿ ಸಂತೋಷ್ ಚೌಹಾಣ್ ಮಾಹಿತಿ ಪಡೆದುಕೊಂಡಿದ್ದಾರೆ.‌ ಈ ವೇಳೆ ಅಸಭ್ಯ ವರ್ತನೆ ತೋರಿದ ಗ್ರಾಮ ಪಂಚಾಯತ ಪಿಡಿಓ ಯೋಗೀಶ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.‌

Home add -Advt

ಘಟನೆ ಬಳಿಕ ಕರವಸೂಲಿಗಾರ ಮಹಿಳೆ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ.‌ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪಿಡಿಓರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.

Related Articles

Back to top button