Kannada NewsKarnataka NewsLatest

ಸಚಿವ ಶ್ರೀರಾಮುಲು ಭೇಟಿಯಾಗಿ ಲ್ಯಾಬ್ ಸ್ಥಾಪನೆಗೆ ಮನವಿ ಮಾಡಿದ ಗಣೇಶ ಹುಕ್ಕೇರಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಚಿಕ್ಕೋಡಿಯಲ್ಲಿ ಕೊರೋನಾ ಟೆಸ್ಟಿಂಗ್ ಲ್ಯಾಬ್ ಸ್ಥಾಪಿಸಬೇಕೆಂದು ನಿರಂತರವಾಗಿ ಬೆನ್ನತ್ತಿರುವ ಚಿಕ್ಕೋಡಿ- ಸದಲಗಾ ಶಾಸಕ ಗಣೇಶ ಹುಕ್ಕೇರಿ, ಗುರುವಾರ ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಶ್ರೀರಾಮುಲು ಅವರನ್ನು ಭೇಟಿಯಾಗಿ ಮತ್ತೊಮ್ಮೆ ಮನವಿ ಮಾಡಿದರು. 
 
ಚಿಕ್ಕೋಡಿ ಬೆಳಗಾವಿಯಿಂದ ಸಾಕಷ್ಟು ಅಂತರದಲ್ಲಿದೆ. ಅಥಣಿಯಂತ ಪ್ರದೇಶದಿಂದ ಬೆಳಗಾವಿಗೆ ಟೆಸ್ಟ್ ಗಾಗಿ ಬರುವುದು ದುಸ್ಸಾಧ್ಯ. ಚಿಕ್ಕೋಡಿ ಮಹಾರಾಷ್ಟ್ರ ಗಡಿಲ್ಲಿರುವುದರಿಂದ ಹೆಚ್ಚಿನ ಅಪಾಯದಲ್ಲಿದೆ. ಹಾಗಾಗಿ ಕೂಡಲೇ ಚಿಕ್ಕೋಡಿಯಲ್ಲಿ ಕೊರೆನಾ ಟೆಸ್ಟ್ ಲ್ಯಾಬ್ ಸ್ಥಾಪಿಸಬೇಕು ಎಂದು ಗಣೇಶ ಹುಕ್ಕೇರಿ ಮನವಿ ಮಾಡಿದರು.
ಚಿಕ್ಕೋಡಿಯಲ್ಲಿ ಲ್ಯಾಬ್ ಸ್ಥಾಪಿಸುವಂತೆ ಸಾಕಷ್ಟು ದಿನದಿಂದ ನಾನು ಕೋರುತ್ತಿದ್ದೇನೆ. ಈ ಹಿಂದೆ ತಮಗೂ ಪತ್ರ ಬರೆದಿದ್ದೆ. ದೂರವಾಣಿಯಲ್ಲೂ ಮಾತನಾಡಿದ್ದೆ. ತಾವು ಲ್ಯಾಬ್ ಸ್ಥಾಪಿಸಲು ಮೌಖಿಕವಾಗಿ ಒಪ್ಪಿಗೆ ಸೂಚಿಸಿದ್ದಿರಿ. ಆದರೆ ಈವರೆಗೂ ಈ ಬಗ್ಗೆ ಕ್ರಮವಾಗಿಲ್ಲ. ಪರಿಸ್ಥಿತಿ ಕೈ ಮೀರುವ ಮುನ್ನ ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಈ ಬಗ್ಗೆ ಶೀಘ್ರವೇ ತೀರ್ಮಾನ ತೆಗೆದುಕೊಳ್ಳುವುದಾಗಿ ಸಚಿವ ಶ್ರೀರಾಮುಲು ಭರವಸೆ ನೀಡಿದರು.

Related Articles

Back to top button