Belagavi NewsBelgaum NewsKannada NewsKarnataka NewsNational

*ಇಂದಿನಿಂದ ಐದು ದಿನ ಭಾರಿ ಮಳೆ: 19 ರಿಂದ ಮುಂಗಾರಿನ ಅಬ್ಬರ ಜೋರು*

ಪ್ರಗತಿವಾಹಿನಿ ಸುದ್ದಿ: ಇಂದಿನಿಂದ ಮುಂದಿನ 5 ದಿನಗಳ ಕಾಲ ರಾಜ್ಯದಲ್ಲಿ ಬಾರೀ ಮಳೆಯ ಮುನ್ಸೂಚನೆ ನೀಡಲಾಗಿದೆ. ಇಂದಿನಿಂದ ಜೂನ್ 20ರ ವರೆಗೆ ರಾಜ್ಯದಲ್ಲಿ ಮಳೆ ಮುಂದುವರಿಕೆಯಾಗಲಿದ್ದು, ಇದರ ಜೊತೆಗೆ ಗಂಟೆಗೆ 40ರಿಂದ 50‌ ಕಿ.ಲೋ ಮೀಟರ್ ವೇಗದಲ್ಲಿ ಬಿರುಗಾಳಿ ಸಹಿತ ಮಳೆ ಬರಲಿದೆ.

Home add -Advt

ಕರಾವಳಿ ಕರ್ನಾಟಕ ಹಾಗೂ ಉತ್ತರ ಒಳನಾಡಿದ ಬಹುತೇಕ ಜಿಲ್ಲೆಯಲ್ಲಿ ಎಂದಿನಂತೆ ಭಾರೀ ಮಳೆಯಾಗಲಿದ್ದು, ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಉತ್ತರ ಕನ್ನಡ ಜಿಲ್ಲೆಯಲ್ಲಿ ಬಾರೀ ಮಳೆಯ ಅಲರ್ಟ್ ನೀಡಲಾಗಿದೆ. ಇನ್ನು ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಕಲಬುರುಗಿ, ವಿಜಯಪುರ, ಕೊಪ್ಪಳ ಜಿಲ್ಲೆಯಲ್ಲಿಯೂ ಮಳೆಯ ಸೂಚನೆ ನೀಡಲಾಗಿದೆ. 

ಜೂನ್ 19 ರಿಂದ ಮುಂಗಾರಿನ ಅಬ್ಬರ

ದಕ್ಷಿಣ ಭಾರತದಲ್ಲಿ ಕಳೆದ ಕೆಲದಿನಗಳಿಂದ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಹಾಗೆಯೇ ರಾಜ್ಯದಲ್ಲೂ ಜೂ. 19ರಿಂದ ಮುಂಗಾರಿನ ಅಬ್ಬರ ಜೋರಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.

ಜೂನ್ 19 ರ ನಂತರದ ನಂತರ ಸಾಮಾನ್ಯ ಮಳೆಯೊಂದಿಗೆ ಕರ್ನಾಟಕದ ಮುಂಗಾರು ಮನೆ ಜೋರಾಗಲಿದೆ. ತಿಂಗಳ ಕೊನೆಯ 10 ದಿನಗಳಲ್ಲಿ ಮತ್ತು ಜುಲೈ 1 ನೇ ವಾರದಲ್ಲಿ ಹೆಚ್ಚು ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

Related Articles

Back to top button