Kannada NewsKarnataka NewsLatest
ಹಿಂಡಲಗಾ ಗಣಪತಿ ಮಂದಿರ ಬಳಿ ಮಕ್ಕಳೊಂದಿಗೆ ಕೆರೆಗೆ ಹಾರಿದ ತಾಯಿ; ತಾಯಿ, ಓರ್ವ ಮಗ ಸಾವು, ಇನ್ನೋರ್ವನಿಗಾಗಿ ಹುಡುಕಾಟ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಹಿಂಡಲಗಾ ಗಣಪತಿ ಮಂದಿರದ ಬಳಿ ಮಕ್ಕಳೊಂದಿಗೆ ಕೆರೆಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಓರ್ವ ಮಗ ಸಾವಿಗೀಡಾಗಿದ್ದು, ಇನ್ನೋರ್ವ ಮಗನಿಗಾಗಿ ಹುಟುಕಾಟ ನಡೆಸಲಾಗುತ್ತಿದೆ.
ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ಸಹ್ಯಾದ್ರಿ ನಗರದ 36 ವರ್ಷದ ಕೃಷಾ ಆತ್ಮಹತ್ಯೆ ಮಾಡಿಕೊಂಡವಳು. 4 ವರ್ಷದ ಮಗ ಭಾವಿರಾ ಶವ ಸಹ ಸಿಕ್ಕಿದೆ. ಇನ್ನೋರ್ವ ಮಗ ವಿರೇನ್ (7) ಗಾಗಿ ಹುಟುಕಾಟ ನಡೆದಿದೆ.
ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,. ಪೊಲೀಸರು ಇನ್ನೋರ್ವ ಮಗುವಿಗಾಗಿ ಹುಡುಕಾಟ ನಡೆಸಿದ್ದಾರೆ.
ಹಿರೋಯಿನ್ ಮಾಡುತ್ತೇನೆಂದು ಯುವತಿ ಬೆನ್ನುಬಿದ್ದಿದ್ದ ಯುವಕ ಅರೆಸ್ಟ್