Latest

ಬಿಜೆಪಿಗೆ ಶಾಸಕ ಎಂ.ಪಿ.ಕುಮಾರಸ್ವಾಮಿ ರಾಜೀನಾಮೆ; ಕಮಲ ಪಕ್ಷಕ್ಕೆ ಶಾಕ್ ಮೇಲೆ ಶಾಕ್..

ಪ್ರಗತಿವಾಹಿನಿ ಸುದ್ದಿ, ಚಿಕ್ಕಮಗಳೂರು: ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಕ್ಕೆ ಒಳಗಾಗಿರುವ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.

ಟಿಕೆಟ್ ಹಂಚಿಕೆಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿ ರಾಜ್ಯಾದ್ಯಂತ ಅಸಮಾಧಾನದ ತೂಫಾನು ಎಬ್ಬಿಸಿಕೊಂಡು ಶಾಕ್ ಮೇಲೆ ಶಾಕ್ ಪಡೆಯುತ್ತಿರುವ ಬಿಜೆಪಿಗೆ ಎಂ.ಪಿ.ಕುಮಾರಸ್ವಾಮಿ ಮತ್ತೊಂದು ಶಾಕ್ ನೀಡಿದ್ದಾರೆ.

ಮೂಡಿಗೆರೆ ಕ್ಷೇತ್ರದಲ್ಲಿ ಶಾಸಕರಾಗಿದ್ದ ಕುಮಾರಸ್ವಾಮಿ ಅವರ ಬದಲು ದೀಪಕ ದೊಡ್ಡಯ್ಯ ಅವರಿಗೆ ಟಿಕೆಟ್ ಘೋಷಿಸಲಾಗಿದೆ. ಇದರಿಂದ ಕೆರಳಿರುವ ಕುಮಾರಸ್ವಾಮಿ ಈಗಾಗಲೇ ತಮ್ಮ ರಾಜೀನಾಮೆಯನ್ನು ಬಿಜೆಪಿ ರಾಜ್ಯಾಧ್ಯಕ್ಷರಿಗೆ ರವಾನಿಸಿದ್ದಾರೆ.

ತಮಗೆ ಟಿಕೆಟ್ ತಪ್ಪಿಸುವುದರ ಹಿಂದೆ ಸಿ.ಟಿ.ರವಿ ಕೈವಾಡವಿದೆ ಎಂದು ಸಹ ಅವರು ಆರೋಪಿಸಿದ್ದಾರೆ. ಇದೀಗ ಬೆಂಬಲಿಗರೊಂದಿಗೆ ತೀವ್ರ ಚರ್ಚೆಯಲ್ಲಿರುವ ಅವರ ಮುಂದಿನ ನಡೆಯ ಬಗ್ಗೆ ಕುತೂಹಲಗಳು ಉಂಟಾಗಿವೆ.

Home add -Advt

https://pragati.taskdun.com/still-hope-will-go-to-bangalore-tomorrow-anila-benake/
https://pragati.taskdun.com/contesting-as-a-non-party-candidate-astagi/
https://pragati.taskdun.com/mass-resignation-of-office-bearers-in-belagavi-rural/

Related Articles

Back to top button