Latest

ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಮುಕೇಶ ಅಂಬಾನಿ ದಾಖಲೆ ಮೊತ್ತದ ಕಾಣಿಕೆ

ಪ್ರಗತಿವಾಹಿನಿ ಸುದ್ದಿ; ಗುರುವಾಯುರು: ಕೇರಳದ ಗುರುವಾಯೂರಿನ ಶ್ರೀ ಕೃಷ್ಣ ದೇವಸ್ಥಾನ ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲೊಂದು. ಈ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿದ ಬಿಲಿಯನೇರ್ ಉದ್ಯಮಿ ಮುಕೇಶ ಅಂಬಾನಿ 1.5 ಕೋಟಿ ರೂ.ಗಳ ಕಾಣಿಕೆ ನೀಡಿದ್ದಾರೆ.

ದೇವಸ್ಥಾನಕ್ಕೆ ಈವರೆಗೆ ಒಬ್ಬ ಭಕ್ತ ಒಂದೇ ಬಾರಿಗೆ ನೀಡಿದ ಅತ್ಯಂತ ದೊಡ್ಡ ಕಾಣಿಕೆ ಇದಾಗಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

ಗುರುವಾಯೂರು ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡುವ ಪೂರ್ವದಲ್ಲಿ ಮುಕೇಶ ಅಂಬಾನಿ ಕುಟುಂಬ ಸಮೇತ ಆಂಧ್ರದ ವೆಂಕಟೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದು, ತಿರುಪತಿ ತಿಮ್ಮಪ್ಪನಿಗೂ 1.5 ಕೋಟಿ ಕಾಣಿಕೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಾನೂನು ಬಾಹಿರ ಧರ್ಮ ಪರಿವರ್ತನೆ ಪ್ರಕರಣದ ಮೊಟ್ಟ ಮೊದಲ ಶಿಕ್ಷೆ ಪ್ರಕಟ

https://pragati.taskdun.com/latest/unlawfull-religious-conversionfirst-convictionuttar-pradesh/

Home add -Advt

Related Articles

Back to top button