Belagavi NewsBelgaum NewsLatest

*ಅಪ್ರಾಪ್ತ ಮಗಳಿಗೆ ಯುವಕನಿಂದ ಕಿರುಕುಳ; ಬುದ್ಧಿಮಾತಿಗೂ ಬಗ್ಗದೇ ಮದುವೆ ಮಾಡಿಕೊಡಿ ಎಂದು ಹಿಂದೆ ಬಿದ್ದ ಆಸಾಮಿ; ಬೇಸತ್ತ ತಂದೆಯಿಂದ ಇಬ್ಬರು ಸಹೋದರರ ಬರ್ಬರ ಹತ್ಯೆ*

ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತ ಮಗಳಿಗೆ ಮದುವೆಯಾಗುವಂತೆ ಪೀಡಿಸುತ್ತಿದ್ದ ಯುವಕನನ್ನು ಕೊಲ್ಲಲು ಹೋಗಿ ಇಬ್ಬರು ಸಹೋದರರನ್ನೇ ಬಾಲಕಿಯ ತಂದೆ ಹತ್ಯೆಗೈದ ಘಟನೆ ಬೆಳಗಾವಿ ಜಿಲ್ಲೆ ಮುರಗೋಡದಲ್ಲಿ ನಡೆದಿದೆ. ಮುರಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ಸೊಗಲು ರಸ್ತೆಯಲ್ಲಿ ದೊಣ್ಣನಕೊಪ್ಪ ಗ್ರಾಮದಲ್ಲಿ ದುಷ್ಕರ್ಮಿಯೊಬ್ಬ ಇಬ್ಬರ ಮೇಲೆ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದು, ಘಟನೆರ್ಯಲ್ಲಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಾಯಪ್ಪ (20) ಮೃತ ಯುವಕ. ಮಾಯಪ್ಪನ ಎದೆ ಹಾಗೂ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಹಲ್ಲೆ ವೇಳೆ ಮಾಯಪ್ಪನನ್ನು ರಕ್ಷಿಸಲು ಬಂದ ಆತನ ಅಣ್ಣ ಯಲ್ಲಪ್ಪನ ಮೇಲೂ ದುಷ್ಕರ್ಮಿ ಫಕೀರಪ್ಪ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನ್ಡೆಸಿದ್ದಾನೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಗ್ರಾಮಸ್ಥರು ಯಲ್ಲಪ್ಪನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಯಲ್ಲಪ್ಪ ಇಂದು ಬೆಳಿಕ್ಕೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಮುರಗೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಫಕೀರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಫಕೀರಪ್ಪನ ಅಪ್ರಾಪ್ತ ಮಗಳನ್ನು ವಿವಾಹವಾಗುವುದಾಗಿ ನಾಯಪ್ಪ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದನಂತೆ. ಆತನಿಗೆ ಫಕೀರಪ್ಪ ಹಾಗೂ ಮನೆಯವರು ಪರಿಪರಿಯಾಗಿ ಬುದ್ಧಿ ಹೇಳಿದರೂ ಮಗಳಿಗೆ ತೊಂದರೆ ಕೊಡುವುದನ್ನು ಮಾಯಪ್ಪ ನಿಲ್ಲಿಸಿರಲಿಲ್ಲ. ಮಾಯಪ್ಪನ ಕಟಕ್ಕೆ ಬೇಸತ್ತ ಫಕೀರಪ್ಪ ಮಾಯಪ್ಪನನ್ನು ಚಾಕುವಿನಿಂದ ಇರುದು ಹತ್ಯೆ ಮಾಡಿದ್ದಾನೆ.

ಈ ವೇಳೆ ಮಾಯಪ್ಪನನ್ನು ರಕ್ಷಿಸಲು ಬಂದ ಆತನ ಅಣ್ಣನ ಮೇಲೂ ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಆತನೂ ಸಾವನ್ನಪ್ಪಿದ್ದಾನೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button