Kannada NewsKarnataka News

ರಾಯಭಾಗ: ಕೊಲೆ ಆರೋಪಿಗಳ ಬಂಧನ

ಪ್ರಗತಿ ವಾಹಿನಿ ಸುದ್ದಿ, ರಾಯಭಾಗ:    ರಾಯಭಾಗದಲ್ಲಿ ಅ.21 ರಂದು ರಾತ್ರಿ ಮಹಾದೇವ ಮಲ್ಲಪ್ಪಾ ಹುರಳಿ (60)  ಎಂಬುವವರನ್ನು ಕೊಲೆಗೈದ ಮೂವರು ಆರೋಪಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
 ಕರೋಶಿಯ ಪ್ರಭಾಕರ ಸದಾಶಿವ ಮಗದುಮ, ಬೆಲ್ಲದ ಬಾಗೇವಾಡಿಯ ಲಕ್ಷö್ಮಣ ನಿಂಗಪ್ಪಾ ಅಳಗುಂಡಿ, ಕೆಂಚನಟ್ಟಿಯ ಶಂಕರ ಬಾಳಪ್ಪಾ ಪಶ್ಚಾಪುರೆ ಬಂಧಿತ ಆರೋಪಿಗಳು.
  ಮಹಾದೇವ ಅವರು ರಾಯಭಾಗದ ತೋಟಗಾರಿಕಾ ಇಲಾಖೆ ಮತ್ತು ಅರಣ್ಯ ಇಲಾಖೆಗೆ ಸೇರಿದ ಜಾಗದ ನಡುವೆ ಹಾದು ಹೋದ ರಸ್ತೆಯಲ್ಲಿ ಅ.21 ರಂದು ರಾತ್ರಿ 10 ಗಂಟೆಯ ವೇಳೆಗೆ ತೆರಳುತ್ತಿದ್ದಾಗ ಅವರನ್ನು ಕೊಲೆ ಮಾಡಲಾಗಿತ್ತು.
ಈ ಬಗ್ಗೆ ರಾಯಭಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
 ರಾಯಭಾಗ ಪಿಐ ಎಚ್. ಡಿ. ಮುಲ್ಲಾ ಅವರ ನೇತ್ರತ್ವದಲ್ಲಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಬೈಕ್ ಹಾಗೂ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಳೆಯ ವೈಷಮ್ಯವೇ ಕೊಲೆಗೆ ಕಾರಣ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
https://pragati.taskdun.com/latest/boy-diedthread-of-kitebelagavi/

Related Articles

Back to top button