Kannada NewsLatest

ದೀಪಾವಳಿ ಹಬ್ಬಕ್ಕೆ ಬಟ್ಟೆ ಖರೀದಿಸಿ ಮನೆಗೆ ತೆರಳುತ್ತಿದ್ದ ಬಾಲಕ ಗಾಳಿಪಟದ ದಾರಕ್ಕೆ ಸಿಲುಕಿ ಸಾವು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ತಂದೆಯೊಂದಿಗೆ ಬೆಳಗಾವಿಗೆ ಬಂದು, ದೀಪಾವಳಿಯ ಹಬ್ಬಕ್ಕೆ ಬಟ್ಟೆ ಖರೀದಿಸಿ ಸಂಭ್ರಮಿಸಿದ್ದ ಬಾಲಕನೊಬ್ಬ ಮನೆಗೆ ತೆರಳುತ್ತಿದ್ದ ವೇಳೆ ಬೆಳಗಾವಿಯ ಗಾಂಧಿನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ ಬೈಕ್ ನಲ್ಲಿ ಹೋಗುತ್ತಿದ್ದಾಗ, ಗಾಳಿಪಟ ಹಾರಿಸಲು ಬಳಸುವ ಮಾಂಜಾ ದಾರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.

ಯಮಕನಮರಡಿ ಬಳಿಯ ಆನಂದಪುರ ಗ್ರಾಮದ ವರ್ಧನ ಈರಣ್ಣ ಬೇಲಿ (5) ಮೃತಪಟ್ಟ ಬಾಲಕ. ದೀಪಾವಳಿ ಹಬ್ಬದ ಸಲುವಾಗಿ ತಂದೆಯೊಂದಿಗೆ ಬೆಳಗಾವಿಗೆ ಬಂದಿದ್ದ ಬಾಲಕ, ಬಟ್ಟೆ ಖರೀದಿಸಿ ವಾಪಸ್ ತಂದೆಯ ಜೊತೆ ಬೈಕ್ ಮೇಲೆ ಊರಿಗೆ ತೆರಳುತ್ತಿದ್ದ. ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಗಾಂಧಿ ನಗರದ ಬಳಿ ಹೋಗುತ್ತಿದ್ದಾಗ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ.

Home add -Advt

ಮಾಳಮಾರುತಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

BJPಯ 14 ಬಂಡಾಯ ಅಭ್ಯರ್ಥಿಗಳ ಉಚ್ಛಾಟನೆ

https://pragati.taskdun.com/politics/14-rebel-bjp-candidatesexpulsionvijayapura/

Related Articles

Back to top button